ಬ್ರಹ್ಮಾವರ: ಅರಸು, ರಾಜೀವ ಗಾಂಧಿ ಜನ್ಮಾದಿನಾಚರಣೆ

Update: 2017-08-20 16:12 GMT

ಬ್ರಹ್ಮಾವರ, ಆ.20: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ದೇವರಾಜ ಅರಸು ಮತ್ತು ರಾಜೀವ್ ಗಾಂಧಿ ಜನ್ಮದಿನಾಚರಣೆಯನ್ನು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಉದ್ಘಾಟಿಸಿ, ದೇವರಾಜ ಅರಸು ರಾಜ್ಯದ ಹಿಂದುಳಿದ ಜನಾಂಗಕ್ಕೆ ಧ್ವನಿಯಾಗಿದ್ದರು. ಅದೇ ರೀತಿ ರಾಜೀವ ಗಾಂಧಿ ದೇಶದ ಯುವ ಜನರೀಗೆ ವೈಜ್ಞಾನಿಕ ಕೊಡುಗೆ ನೀಡಿದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ರಾಘವೇಂದ್ರ ಜೆ.ಬಿ. ಶೀನ ಪೂಜಾರಿ, ಸದಾಶಿವ ನಾಯಕ್, ರವಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News