ಸೆ.1ರಂದು ಚೀನಾ ವಸ್ತುಗಳ ಬಹಿಷ್ಕಾರ ಅಭಿಯಾನ
Update: 2017-08-23 16:32 GMT
ಉಡುಪಿ, ಆ.23: ಬಜರಂಗದಳದ ನೇತೃತ್ವದಲ್ಲಿ ಚೀನಾ ವಸ್ತುಗಳನ್ನು ಸ್ವಯಂ ಪ್ರೇರಿತವಾಗಿ ಸುಟ್ಟು ಹಾಕಿ ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನ ಸೆ.1ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೀನಾ ಭಾರತದ ಮಾರುಕಟ್ಟೆಯನ್ನು ಅತಿಕ್ರಮಣ ಮಾಡಿರುವ ಪರಿಣಾಮ ನಮ್ಮ ಎಲ್ಲ ಉದ್ಯಮಗಳು ಕುಸಿದಿವೆ. ಇದರಿಂದ ಗುಡಿಕೈಗಾರಿಕೆಗಳು ಮುಚ್ಚಿ ಕುಶಲಕರ್ಮಿಗಳು ಬೀದಿಗೆ ಬಿದ್ದಿದ್ದಾರೆ. ಈ ಆಂದೋಲನದ ಮೂಲಕ ಕೇಂದ್ರ ಸರಕಾರ ಚೀನ ವಸ್ತುಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ದಿನೇಶ್ ಮೆಂಡನ್, ಸುನೀಲ್ ಕೆ.ಆರ್., ದಿನೇಶ್ ಹೆಬ್ರಿ ಉಪಸ್ಥಿತರಿದ್ದರು.