ಬಂಟ್ವಾಳ: ತಾಲೂಕು ತುಳುಕೂಟದ ಅಧ್ಯಕ್ಷರಾಗಿ ಸುದರ್ಶನ್ ಜೈನ್ ಆಯ್ಕೆ

Update: 2017-08-24 16:16 GMT

ಬಂಟ್ವಾಳ, ಆ. 24: ಬಂಟ್ವಾಳ ತಾಲೂಕು ತುಳುಕೂಟದ ಅಧ್ಯಕ್ಷರಾಗಿ ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಅವರು ಆಯ್ಕೆಯಾಗಿದ್ದಾರೆ.

ಬಿ.ಸಿ.ರೋಡಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.

ಈ ಹಿಂದೆ ತುಳುಕೂಟದ ಅಧ್ಯಕ್ಷರಾಗಿದ್ದ ಎ.ಸಿ.ಭಂಡಾರಿ ಇದೀಗ ಅಕಾಡೆಮಿ ಅಧ್ಯಕ್ಷರಾಗಿ ನೇಮಕವಾದ ಹಿನ್ನಲೆಯಲ್ಲಿ ಸುದರ್ಶನ್ ಜೈನ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆಗೊಲೀಸಲಾಗಿದೆ. ಎ.ಸಿ.ಭಂಡಾರಿಯವರನ್ನು ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಗೋಪಾಲ ಅಂಚನ್,ತುಳು ಕೂಟದ ಪ್ರಮುಖರಾದ ಡಿ.ಎಂ. ಕುಲಾಲ್, ಬಿ.ತಮ್ಮಯ್ಯ, ಜಯಾನಂದ ಪೆರಾಜೆ, ಬಿ.ಕೆ.ಇದ್ದಿನಬ್ಬ, ಕ್ರಷ್ಣ ಶರ್ಮ, ಪ್ರಭಾಕರ ಪ್ರಭು, ನಾರಾಯಣ ಪೆರ್ನೆ, ಎಚ್.ಕೆ.ನಯನಾಡು, ಸುಭಾಶ್ಚಂದ್ರ ಜೈನ್, ರಮಾ ಎಸ್.ಭಂಡಾರಿ, ಗಣೇಶ ನಾಯ್ಕ, ಚಂದ್ರಶೇಖರ ಗಟ್ಟಿ, ಸತೀಶ್ ಕುಮಾರ್, ಸುಕುಮಾರ್ ಮೈರಾನ್ ಪಾದೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News