ನಡುಪದವು: ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ

Update: 2017-08-28 15:09 GMT

ಕೊಣಾಜೆ,ಆ.28: ನಡುಪದವು ಬಳಿಯ ಕುಂಟಾಲಗುಳಿ ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಹಿಂಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಸಾಪ್ಟ್ ವೇರ್ ಇಂಜಿನಿಯರ್ ಪ್ರವೀಣ್ ಶಂಕರ್ ಎಂಬವರ ಮನೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಇತ್ತೀಚೆಗೆ ಬೆಲ್ಚಿಯಂ ಕಂಪೆನಿಯೊಂದಕ್ಕೆ ಉದ್ಯೋಗಕ್ಕೆಂದು ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಕುಟುಂಬ ಸಮೇತ ತೆರಳಿದ್ದರು.

ಮನೆಯಲ್ಲಿ ಯಾರೂ ಇಲ್ಲದ ಅವಕಾಶವನ್ನು ಬಳಸಿಕೊಂಡ ಕಳ್ಳರು ಮನೆಯ ಹಿಂಬಾಗಿಲನ್ನು ಮುರಿದಿದ್ದಾರೆ.  ಬಳಿಕ ರೂಮ್‍ನೊಳಗಿದ್ದ ಎರಡು ಕಪಾಟುಗಳನ್ನು ಮುರಿದು ಹುಡುಕಾಡಿದ್ದಾರೆ. ಆದರೆ ಅವರಿಗೆ ಅದರಲ್ಲಿ ಯಾವುದೇ ನಗನಗದು ದೊರೆತಿರಲಿಲ್ಲ.  ಬಳಿಕ ದೇವರ ಕೋಣೆಯಲ್ಲಿ ಕಾಣಿಕೆ ಡಬ್ಬಿಯನ್ನು ಕಳ್ಳತನ ನಡೆಸಿದ್ದಾರೆ.

ಪ್ರವೀಣ್ ಶಂಕರ್ ಅವರ ತಮ್ಮ ಪ್ರಶಾಂತ್ ಹಾಗೂ ತಂದೆ ರಾಮಚಂದ್ರ ಭಟ್ ಅವರು ಸೋಮವಾರ ಸಂಜೆ ಈ ಮನೆಗೆ ಭೇಟಿ ಕೊಟ್ಟಾಗ ಘಟನೆ ಬೆಳಕಿಗೆ ಬಂದಿದೆ. ಕಳ್ಳತನ ಕೃತ್ಯ ಎರಡು ದಿನಗಳ ಅಂತರದೊಳಗೆ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ನಡುಪದವು ಪರಿಸರದಲ್ಲಿ ಹೆಚ್ಚುತ್ತಿರುವ ಕಳ್ಳರ ಅಟ್ಟಹಾಸ

ನಡುಪದವು ಪರಿಸರದಲ್ಲಿ ಇತ್ತೀಚೆಗೆ ಕಳ್ಳತನ ಕೃತ್ಯಗಳು ಹೆಚ್ಚುತ್ತಿದ್ದು ಕಳೆದ ಒಂದು ತಿಂಗಳ ಹಿಂದೆಯಷ್ಟೇ ದಸ್ತಾವೇಜು ಬರಹಗಾರ ಸದಾಶಿವಯ್ಯ ಎಂಬವರ ಮನೆಗೆ ನುಗ್ಗಿದ್ದ ಕಳ್ಳರು ಮನೆಮಂದಿ ಇರುವಾಗಲೇ ಬೆದರಿಸಿ ಕಳ್ಳತನ ನಡೆಸಿದ್ದರು. ಅಲ್ಲದೆ ಕೆಲ ದಿನಗಳ ಬಳಿಕ ಅದೇ ಮನೆಗೆ ರಾತ್ರಿಯ ವೇಳೆ ಮೂರು ಜನರ ತಂಡವೊಂದು ದಾರಿ ಕೇಳುವ ನೆಪದಲ್ಲಿ ಬಾಗಿಲು ಬಡಿದಿದ್ದರು. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿತ್ತು. ಆದರೆ ಈವರೆಗೆ ಯಾವುದೇ ಆರೋಪಿಯ ಪತ್ತೆಯಾಗಿಲ್ಲ. ಇದೀಗ ಮತ್ತೊಂದು ಕಳ್ಳತನ ಕೃತ್ಯ ನಡೆದಿರುವುದು ಪರಿಸರದ ಜನರನ್ನು ಆತಂಕಗೊಳ್ಳುವಂತೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News