ಪತಿ ಮಕ್ಕಳನ್ನು ಕಳೆದುಕೊಂಡ ಮಹಿಳೆ ಆತ್ಮಹತ್ಯೆಗೆ ಶರಣು
Update: 2017-08-29 16:31 GMT
ಶಂಕರನಾರಾಯಣ, ಆ.29: ಕಳೆದ ವರ್ಷ ಉಳ್ಳೂರು ಗ್ರಾಮದ ಐರ್ಬೈಲು ಎಂಬಲ್ಲಿ ಪತಿ ಹಾಗೂ ಇಬ್ಬರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ಮಾನಸಿಕವಾಗಿ ನೊಂದ ಮಹಿಳೆಯೊಬ್ಬರು ಆ.27ರಂದು ರಾತ್ರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತರನ್ನು ಉಳ್ಳೂರು ಗ್ರಾಮದ ಐರ್ಬೈಲುವಿನ ಜ್ಯೋತಿ ಕಿಣಿ(37) ಎಂದು ಗುರುತಿಸಲಾಗಿದೆ. 2016ರ ಮೇ 11ರಂದು ಮನೆ ಸಮೀಪ ಆಟ ಆಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆ ಬಿದ್ದ ಮಕ್ಕಳಾದ ಪ್ರಕಾಶ್(15) ಹಾಗೂ ಯೋಗೀಶ್ (14) ಎಂಬವರನ್ನು ರಕ್ಷಿಸಲು ಹೋದ ತಂದೆ ರಾಘವೇಂದ್ರ ಕಿಣಿ(44) ಸಹಿತ ಮೂವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
ಇದೇ ಚಿಂತೆಯಲ್ಲಿ ಮನನೊಂದ ಪತ್ನಿ ಜ್ಯೋತಿ ಕಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.