ಹತ್ತಿ ಸಾಗಾಟದ ಲಾರಿಗೆ ಬೆಂಕಿ
Update: 2017-08-30 06:21 GMT
ಉಡುಪಿ, ಆ. 30: ಹತ್ತಿ ಸಾಗಾಟ ಮಾಡುತ್ತಿದ್ದ ಲಾರಿಯೊಂದಕ್ಕೆ ಬೆಂಕಿ ಹೊತ್ತುಕೊಂಡ ಘಟನೆ ಬ್ರಹ್ಮಾವರ ಸಮೀಪದ ಸಾಲ್ಮರ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಹಾಸನದಿಂದ ಬ್ರಹ್ಮಾವರಕ್ಕೆ ಈಚರ್ ಲಾರಿಯಲ್ಲಿ ಹತ್ತಿ ಸಾಗಾಟ ಮಾಡಲಾಗುತ್ತಿತ್ತು. ಹತ್ತಿ ಸಾಗಾಟದ ಲಾರಿಗೆ ಬೆಂಕಿ ಹೊತ್ತಿಕೊಂಡ ಬಗ್ಗೆ ಮಾಹಿತಿ ಅರಿತ ಉಡುಪಿ ಅಗ್ನಿ ಶಾಮಕ ದಳ ತಕ್ಷಣ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಾರಿ ಚಾಲಕ ಸೋಮನ್ನ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಿಂದ ಸುಮಾರು 60 ಸಾವಿರ ರೂ. ನಷ್ಟ ಉಂಟಾಗಿರುವುದಾಗಿ ಮಾಲಕ ರಾಯಿಸ್ ಅಹ್ಮದ್ ಎಂಬವರು ಇಲ್ಲಿನ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.