​ಕುಂದೇಶ್ವರ ದೇವಳದಲ್ಲಿ ಕಲಾವಿದರ ನಗದು ಕಳವು

Update: 2017-08-31 17:06 GMT

ಕುಂದಾಪುರ, ಆ.31: ಕಲಾವಿದರೊಬ್ಬರ ನಗದು ಹಣವನ್ನು ಕುಂದೇಶ್ವರ ದೇವಸ್ಥಾನದ ರೂಮಿನ ಬೀಗ ಮುರಿದು ಕಳವು ಮಾಡಿರುವ ಘಟನೆ  ನಡೆದಿದೆ.

ಕಾರ್ಕಳ ಬೈಲೂರು ಎರ್ಲಪಾಡಿಯ ಸಚ್ಚಿನ್ ದೇವಾಡಿಗ(25) ಹಾಗೂ ಅವರ ತಂಡದವರಾದ ಯಶೋಧರ, ಸುಜಿತ್ ಎಂಬವರು ಕುಂದಾಪುರದ ಕುಂದೇಶ್ವರದ ಸಾರ್ವಜನಿಕ ಗಣೇಶೋತ್ಸವದ ಡ್ಯಾಬ್ಲೋಗಳಲ್ಲಿ ನೃತ್ಯ ಕಾರ್ಯ ಕ್ರಮ ನೀಡಲು ಬಂದಿದ್ದರು. ಇವರಿಗೆ ತಂಗಲು ಕುಂದೇಶ್ವರ ದೇವಸ್ಥಾನದಲ್ಲಿ ಕಮಿಟಿಯವರು ನೀಡಿದ ರೂಮಿನಲ್ಲಿ ಹಿಂದಿನ ಕಾರ್ಯಕ್ರಮಗಳಲ್ಲಿ ದೊರೆತ 24,000 ರೂ. ಹಣವನ್ನು ಇಟ್ಟು ಬಳಿಕ ಕಾರ್ಯಕ್ರುದಲ್ಲಿ ಪಾಲ್ಗೊಳ್ಳಲು ತೆರಳಿದ್ದರು.

ಕಾರ್ಯಕ್ರಮ ಮುಗಿಸಿ ರೂಮಿಗೆ ಬಂದು ನೋಡಿದಾಗ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಬ್ಯಾಗಿನಲ್ಲಿ ಇಟ್ಟಿದ್ದ 24,000 ರೂ. ನಗದು ಕಳವು ಮಾಡಿರುವುದು ತಿಳಿದುಬಂತು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News