ರಸ್ತೆ ಬದಿಯ ಮರದ ಗೆಲ್ಲು ಕಡಿದವರ ವಿರುದ್ಧ ಪ್ರಕರಣ ದಾಖಲು

Update: 2017-09-02 17:00 GMT

ಮಂಗಳೂರು, ಸೆ. 2: ನಗರದ ಕೋಡಿಯಾಲ್‌ಬೈಲು ಗ್ರಾಮದ ಉರ್ವಸ್ಟೋರ್ ಲೇಡಿಹಿಲ್ ರಸ್ತೆಯ ಕಾನ್ವೆಂಟ್‌ನ ಬದಿಯಲ್ಲಿ ಜಾಹಿರಾತು ಫಲಕಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕಾಗಿ ಮರದ ಗೆಲ್ಲುಗಳನ್ನು ಕಡಿದ ಬಗ್ಗೆ ಸಿಲಾ ಜಾಹಿರಾತು ಕಂಪೆನಿಯ ಮಾಲಕ ವಾಲ್ವರ್ ಹಾಗೂ ಗೆಲ್ಲುಗಳನ್ನು ಕಡಿದ ಸಂತೋಷ್ ಪಡೀಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅತ್ತಾವರ ಗ್ರಾಮದ ಮಿಲಾಗ್ರಿಸ್ ರಸ್ತೆಯ ಮರದ ಗೆಲ್ಲುಗಳನ್ನು ಕಡಿದ ಬಗ್ಗೆ ವಿಚಾರಿಸಿದಾಗ ಈ ಮರದ ಗೆಲ್ಲುಗಳನ್ನು ಮನಪಾ ಕೆಲಸಗಾರರು ಕಡಿದಿರುವುದಾಗಿ ತಿಳಿದು ಬಂದ ಮೇರೆಗೆ ಮನಪಾ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ಮಂಗಳೂರು ವಲಯ ಅರಣ್ಯಾಧಿಕಾರಿಯ ಕಚೇರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News