ಬೈಕ್‌ಗಳ ಢಿಕ್ಕಿ: ಸಹಸವಾರ ಮೃತ್ಯು

Update: 2017-09-02 18:15 GMT

ಉಡುಪಿ, ಸೆ.2: ಉಡುಪಿಯಿಂದ ಕಾರ್ಕಳಕ್ಕೆ ಮಗನ ಜತೆ ಬೈಕ್‌ನಲ್ಲಿ ಹಿಂಬದಿಯ ಸವಾರನಾಗಿ ಹೋಗುತಿದ್ದ ಸಂದರ್ಭ ಇನ್ನೊಂದು ಬೈಕು ಢಿಕ್ಕಿ ಹೊಡೆದು ಕಾರ್ಕಳ ತಾಲೂಕಿನ ನದಿಕೊಟ್ರೆಬೆಟ್ಟಿನ ನಿಂಜೂರು ನಿವಾಸಿ ಭಾಸ್ಕರ ಎಸ್.ಶೆಟ್ಟಿ (67) ಎಂಬವರು ಮೃತಪಟ್ಟಿದ್ದಾರೆ.

ಪೃಥ್ವಿರಾಜ್ ಶೆಟ್ಟಿ ತನ್ನ ಬೈಕ್‌ನಲ್ಲಿ ತಂದೆಯನ್ನು ಕೂರಿಸಿಕೊಂಡು ಇಂದ್ರಾಳಿ ಪೆಟ್ರೋಲ್ ಬಂಕ್ ಸಮೀಪ ಹೋಗುತ್ತಿದ್ದಾಗ ಯಾವುದೇ ಸೂಚನೆ ನೀಡದೇ ಬೈಕೊಂದು ಹಠಾತ್ತನೆ ಬಂದು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಭಾಸ್ಕರ ಶೆಟ್ಟಿ ತಲೆಗೆ ತೀವ್ರ ಸ್ವರೂಪದ ಗಾಯವಾಗಿತ್ತು. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News