ಕೇಂದ್ರ ಮಂತ್ರಿಯಾಗಿ ಅನಂತ್ ಕುಮಾರ್ ಹೆಗಡೆ : ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

Update: 2017-09-03 07:42 GMT

ಮುಂಡಗೋಡ, ಸೆ. 3: ಉತ್ತರಕನ್ನಡ ಲೋಕಸಭಾ ಸದಸ್ಯ ಅನಂತ್ ಕುಮಾರ್ ಹೆಗಡೆ ಕೇಂದ್ರಮಂತ್ರಿಯಾಗಿ ಆಯ್ಕೆಯಾಗಿದ್ದಕ್ಕೆ ಮುಂಡಗೋಡ ಬಿಜೆಪಿ ತಾಲೂಕಾ ಘಟಕ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿತು.

ಇಂದು ಬೆಳಗ್ಗೆ ಅನಂತ್ ಕುಮಾರ್ ಹೆಗಡೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿ ಅನಂತ್ ಕುಮಾರ್ ಹೆಗಡೆಯವರಿಗೆ ಜೈಕಾರ ಹಾಕಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಉತ್ತರಕನ್ನಡ ಜಿಲ್ಲೆಯ ಹೆಮ್ಮೆಯ ಪುತ್ರ ಅನಂತ್ ಕುಮಾರ್ ಹೆಗಡೆ ಅವರಿಗೆ ಜಯವಾಗಲಿ ಎಂದು ಹಷೋದ್ಘಾರ ಹಾಕಿದರು.

ಮಾಜಿ ಶಾಸಕ ವಿ.ಎಸ್.ಪಾಟೀಲ, ತಾಲೂಕಾ ಅಧ್ಯಕ್ಷ ಗುಡ್ಡಪ್ಪ ಕಾತೂರ, ಎಲ್.ಎಸ್.ಎಮ್.ಪಿ ಅಧ್ಯಕ್ಷ ಸುನೀಲ ವರ್ಣೇಕರ, ಮಾಜಿ ಪ.ಪಂ ಅಧ್ಯಕ್ಷ ಫಣಿರಾಜ ಹದಳಗಿ, ಇಂದೂರ ಗ್ರಾ.ಪಂ ಅಧ್ಯಕ್ಷ ಮಹ್ಮದರಫೀಕ ದೇಸಳ್ಳಿ, ಅಲ್ಪಸಂಖ್ಯಾತರ ಅಧ್ಯಕ್ಷ ಮಹಮ್ಮದಗೌಸ ಅತ್ತಾರ, ಧುರಿಣರಾದ ನಾಗಭೂಷಣ ಹಾವಣಗಿ, ತುಕಾರಾಮ ಇಂಗಳೆ, ಡಿ.ಜೆ ಕುಲಕರ್ಣಿ, ಮಹೇಶ ಹೊಸಕೊಪ್ಪ, ಉಮೇಶ ಬಿಜಾಪುರ, ಡಿ.ಜೆ.ಕುಲಕರ್ಣಿ, ಚೆನ್ನಪ್ಪಾ ಹಿರೇಮಠ, ಉಮೇಶ ಗಾಣಗೇರ ನಾಗರಾಜ ಕುನ್ನೂರ, ರಮೇಶ ಸವಣೂರ, ವಿಠ್ಠಲ ಬಾಳಂಬೀಡ್, ಕೆಂಜೋಡಿ ಗಲಿಬಿ, ಲಿಂಗಜ್ಜ ಕೊಣನಕೇರಿ, ಬಸವರಾಜ ಹರಿಜನ, ನಾಗರಾಜ ಬೆಣ್ಣಿ, ಮಲ್ಲಿಕಾರ್ಜುನ ಗೌಳಿ, ವಾಯ್.ಪಿ ಪಾಟೀಲ, ರವಿ ಪಾಟೀಲ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News