ಸೆ.4: ‘ಅಧ್ಯಕ್ಷರ ರಾಜೀನಾಮೆ’ ಕೃತಿ ಬಿಡುಗಡೆ
Update: 2017-09-03 14:08 GMT
ಮಂಗಳೂರು, ಸೆ.3 ನಿಲಾವು ಕಲಾ ವೇದಿಕೆಯು ಹೊರತರುತ್ತಿರುವ ಹುಸೈನ್ ಕಾಟಿಪಳ್ಳ ರಚಿಸಿದ ‘ಅಧ್ಯಕ್ಷರ ರಾಜೀನಾಮೆ’ ಕಥಾ ಸಂಕಲನ ಮತ್ತು ‘ಈದ್ ಮುಬಾರಕ್’ ಬ್ಯಾರಿ ಹಾಡುಗಳ ಡಿವಿಡಿ ಬಿಡುಗಡೆ ಕಾರ್ಯಕ್ರಮವು ಸೆ. 4ರಂದು ಸಂಜೆ 4:30ಕ್ಕೆ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಭಾಂಗಣದಲ್ಲಿ ನಡೆಯಲಿದೆ.
ಶಾಸಕ ಬಿ.ಎ.ಮೊಯ್ದಿನ್ ಬಾವಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅಲ್ಮುಝೈನ್ ಜುಬೈಲ್ನ ಆಡಳಿತ ನಿರ್ದೇಶಕ ಝಕರಿಯಾ ಜೋಕಟ್ಟೆ ಪುಸ್ತಕ ಹಾಗು ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಡಿವಿಡಿ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದ್ದಾರೆ.