ಎಸ್ಸೆಸ್ಸೆಫ್ ಕುದ್ಲೂರು ಘಟಕದ ಪದಾಧಿಕಾರಿಗಳ ಆಯ್ಕೆ
ಕುದ್ಲೂರು, ಸೆ.4: ಎಸ್ಸೆಸ್ಸೆಫ್ ಕುದ್ಲೂರು ಯುನಿಟ್ ವತಿಯಿಂದ ಅಸ್ಮಾಹುಲ್ ಬದ್ರ್ ಮಜ್ಲಿಸ್ ಉದ್ಘಾಟನೆ ಹಾಗೂ ಯುನಿಟ್ ಪುನರ್ ಸಮಿತಿ ಆಯ್ಕೆ ಇಲ್ಲಿನ ಬದ್ರ್ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು.
ಸ್ಥಳೀಯ ಎಸ್.ವೈ.ಎಸ್. ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ವೇಳೆ ಎಸ್ಸೆಸ್ಸೆಫ್ ಉಪ್ಪಿನಂಗಡಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಎಂ.ಎಂ.ಮಹ್ರೂಫ್ ಆತೂರು ಅಧ್ಯಕ್ಷತೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಉವೈಸ್ ಕುದ್ಲೂರು, ಉಪಾಧ್ಯಕ್ಷರಾಗಿ ಸಹಲ್, ರಮೀಝ್, ಪ್ರಧಾನ ಕಾರ್ಯದರ್ಶಿಯಾಗಿ ಇಮ್ರಾನ್ ಮಜಲಕ್ಕೆ, ಜೊತೆ ಕಾರ್ಯದರ್ಶಿಗಳಾಗಿ ಅನಸ್, ಮಜೀದ್ ಕೋಶಾಧಿಕಾರಿಗಳಾಗಿ ಮುವಾದ್ ಕುದ್ಲೂರು ಆಯ್ಕೆ ಆದರು.
ಬಳಿಕ ಜಿಲ್ಲಾ ಎಸ್.ವೈ.ಎಸ್. ಸದಸ್ಯ ಅಬೂಬಕ್ಕರ್ ಸಾದಿಯವರು ಸಮಿತಿಯ ಆಗುಹೋಗುಗಳ ಕುರಿತು ತರಗತಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಬದ್ರ್ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಹಾಜಿ, ಎಸ್.ವೈ.ಎಸ್. ಅಧ್ಯಕ್ಷ ಹನೀಫ್ ಕುದ್ಲೂರು, ಎಸ್.ವೈ.ಎಸ್. ಕೋಶಾಧಿಕಾರಿ ಎನ್.ಅಬೂಬಕರ್ ಉಪಸ್ಥಿತರಿದ್ದರು.
ಉಪ್ಪಿನಂಗಡಿ ಸೆಕ್ಟರ್ ದಅವಾ ಕನ್ವೀನರ್ ಸಿರಾಜ್ ಕುದ್ಲೂರು ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಇಮ್ರಾನ್ ವಂದಿಸಿದರು.