ಕುಂದಾಪುರ:ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆ
ಕುಂದಾಪುರ, ಸೆ.4: ಕುಂದಾಪುರ ಕೆಲಸಗಾರರ ಸಂಘದ 42ನೇ ವಾರ್ಷಿಕ ಮಹಾಸಭೆ ಯು.ದಾಸ ಭಂಡಾರಿ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯದರ್ಶಿ ಜ್ಯೋತಿ ಸ್ವಾಗತಿಸಿದ ಬಳಿಕ ಅಗಲಿದ ಸಂಗಾತಿಗಳಿಗೆ ಸಂತಾಪ ಸೂಚಿಸ ಲಾಯಿತು. ಕಳೆದ ಒಂದು ವರ್ಷದ ಚಟುವಟಿಕೆಗಳ ವರದಿಯನ್ನು ಮಂಡಿಸಿ ಅದರ ಮೇಲೆ ಚರ್ಚೆ ನಡೆಯಿತು.
ಮುಖ್ಯಅತಿಥಿಯಾಗಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ್ ಭಾಗವಹಿಸಿದ್ದರು. ಸಂದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಗೇರು ಬೀಜ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಪರ್ಕ ಮಾಡುವಂತೆ ಹಾಗೂ ಸೆ.14ರ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸುವಂತೆ ಕರೆ ನೀಡಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹೊಸ ಸಮಿತಿಯನ್ನು ರಚಿಸಿದ್ದು, ಸಮಿತಿ ಅಧ್ಯಕ್ಷರಾಗಿ ಯು. ದಾಸ ಭಂಡಾರಿ ಮರು ಆಯ್ಕೆಯಾದರು. ಕಾರ್ಯದರ್ಶಿಯಾಗಿ ಶಾರದ ಅವರನ್ನು ಆಯ್ಕೆ ಮಾಡಲಾಯಿತು. 13 ಮಂದಿಯ ಸವಿುತಿಯನ್ನು ಸಹ ರಚಿಸ ಲಾಯಿತು.