ಕೆಪಿಟಿ ಹಾಸ್ಟೆಲ್‌ಗೆ ಐವನ್ ಡಿಸೋಜ ಭೇಟಿ

Update: 2017-09-04 16:59 GMT

ಮಂಗಳೂರು, ಸೆ.4: ವಿಧಾನ ಪರಿಷತ್‌ನ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಕರ್ನಾಟಕ ಪಾಲಿಟೆಕ್ನಿಕ್‌ಗೆ ಭೇಟಿ ನೀಡಿ ಸಂಜೆ ಪಾಲಿಟೆಕ್ನಿಕ್ ನ ಕಾರ್ಯಚಟುವಟಿಕೆ ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರು ಹಾಗೂ ಸಂಜೆ ಪಾಲಿಟೆಕ್ನಿಕ್‌ನ ವಿಶೇಷಾಧಿಕಾರಿ ಮತ್ತು ಇಲಾಖೆಯ ಮುಖ್ಯಸ್ಥರೊಂದಿಗೆ ವಿಚಾರ ವಿನಿಮಯ ನಡೆಸಿದರು.

ಕರ್ನಾಟಕ ಪಾಲಿಟೆಕ್ನಿಕ್‌ನ ಅಭಿವೃದ್ದಿಗೆ 10 ಕೋ.ರೂ. ಪ್ರಸ್ತಾವನೆ ನೀಡಲಾಗಿದೆ. ನಾದುರಸ್ಥಿಯಲ್ಲಿರುವ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಲು ಪ್ರಾಂಶುಪಾಲ ಬಾಬುದೇವಾಡಿಗ ಮನವಿ ಸಲ್ಲಿಸಿದರು.

ಈಗಾಗಲೇ ದುರಸ್ಥಿಗೊಳಿಸಿದ ‘ಬಿ’ ಬ್ಲಾಕ್‌ನ ಬಾಕಿಯುಳಿದ ಕಾಮಗಾರಿಯನ್ನು ತಿಂಗಳೊಳಗೆ ಮುಗಿಸುವಂತೆ ಐವನ್ ಡಿಸೋಜ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭ ವಾರ್ಡನ್ ಮೋಹನ್ ರಾಜ್, ಇಲೆಕ್ಟ್ರಿಕಲ್ ಎಚ್.ಒ.ಡಿ. ನರಸಿಂಹ ಭಟ್, ದಯಾನಂದ ಗಟ್ಟಿ ಮತ್ತಿತರರು ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News