ಮಂಜೇಶ್ವರ: ದೋಣಿ ಮಗುಚಿ ಬಿದ್ದು ಯುವಕ ಮೃತ್ಯು

Update: 2017-09-05 16:04 GMT

ಮಂಜೇಶ್ವರ, ಸೆ. 5: ಇಲ್ಲಿನ ಶಿರಿಯಾ ಹೊಳೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮಗುಚಿ ಬಿದ್ದು ಯುವಕನೋರ್ವ ಮೃತಟಪಟ್ಟ ಘಟನೆ ವರದಿಯಾಗಿದೆ.

ಕರ್ನಾಟಕ ಪುತ್ತೂರು ನಿವಾಸಿ, ಅಣಂಗೂರಿನಲ್ಲಿ ವಾಸವಿರುವ ಮುಹಮ್ಮದ್ ಅಲಿ(36) ಮೃತರು ಎಂದು ಗುರುತಿಸಲಾಗಿದೆ. ಅವರೊಂದಿಗೆ ಇಬ್ಬರು ಸ್ನೇಹಿತರು ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದ ವೇಳೆ ದೋಣಿ ಮಗುಚಿ ಬಿದ್ದಿದ್ದು ಈ ಸಂದರ್ಭ ಇಬ್ಬರು ಈಜಿ ಪಾರಾಗಿದ್ದು, ಈ ವೇಳೆ ಮುಹಮ್ಮದ್ ಅಲಿ ನೀರಿನ ಸೆಳೆತಕ್ಕೊಳಗಾಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News