ಕೆಪಿಸಿಸಿ ಕರಾವಳಿ ಅಲ್ಪ ಸಂಖ್ಯಾತರ ಘಟಕದ ಖಂಡನೆ

Update: 2017-09-06 16:00 GMT

ಮಂಗಳೂರು.ಸೆ,6: ಗೌರಿ ಲಂಕೇಶ್ ಹತ್ಯೆಯಿಂದ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ನಾಗರಿಕ ಸಮಾಜದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ.ಈ ಕೃತ್ಯದಲ್ಲಿ ತೊಡಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಲು ಸರಕಾರ ಕ್ರಮ ಕೈ ಗೊಳ್ಳಬೇಕು.ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಎಲ್ಲರೂ ಯಾವೂದೇ ಅಭಿಪ್ರಾಯ ಭೇದವನ್ನು ಇಟ್ಟುಕೊಂಡು.ವೈಚಾರಿಕವಾಗಿ ತಮ್ಮ ಸಿದ್ಧಾಂತವನ್ನು ಪ್ರಚಾರ ಮಾಡಬೇಕೆ ಹೋರತು ಈ ರೀತಿ ದುಷ್ಕತ್ಯದಿಂದ ಅಲ್ಲ.ಈ ದುಷ್ಕೃತ್ಯವನ್ನು ತೀವ್ರವಾಗಿ ಖಂಡಿಸಿ ಸಂತಾಪ ಸೂಚಿಸುವುದಾಗಿ ಕೆಪಿಸಿಸಿಯ ಕರಾವಳಿ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಯು.ಬಿ.ಸಲೀಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News