ಸಾಲಿಗ್ರಾಮ: ತ್ರಿಚಕ್ರ ವಾಹನ ವಿತರಣೆ
Update: 2017-09-07 15:38 GMT
ಉಡುಪಿ, ಸೆ.7: ಸಾಲಿಗ್ರಾಮ ಪಟ್ಟಣ ಪಂಚಾಯತ್ನ 2017-18ನೆ ಸಾಲಿನ ಶೇ.3ರ ವಿಕಲಚೇತನ ಕಲ್ಯಾಣ ಕಾರ್ಯಕ್ರಮದ ಎಸ್ಎಫ್ಸಿ ನಿಧಿಯಡಿ ಇಬ್ಬರು ಫಲಾನುಭವಿಗಳಾದ ರಮೇಶ ಆಚಾರಿ ಮತ್ತು ಗಣೇಶ್ ಪೂಜಾರಿ ಇವರಿಗೆ ತ್ರಿಚಕ್ರ ವಾಹನವನ್ನು ಪಟ್ಟಣ ಪಂಚಾಯತ್ನ ಅಧ್ಯಕ್ಷೆ ರತ್ನ ನಾಗರಾಜ ಗಾಣಿಗ ವಿತರಿಸಿದರು.
ಈ ಸಂಧರ್ದಲ್ಲಿ ಉಪಾಧ್ಯಕ್ಷ ಉದಯ ಪೂಜಾರಿ, ಸದಸ್ಯರಾದ ಸಂಜೀವ ದೇವಾಡಿಗ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.