ಮಣಿಪಾಲ: ಸೆ.10ರಂದು ಬರ್ಗರ್ ಲಾಂಜ್‌ನ 9ನೆ ಮಳಿಗೆ ಉದ್ಘಾಟನೆ

Update: 2017-09-08 17:48 GMT

ಮಂಗಳೂರು, ಸೆ.8: ಕೇರಳದಲ್ಲಿ ಈಗಾಗಲೇ ವಿಭಿನ್ನ ಬರ್ಗರ್ ತಿಂಡಿ ತಿನಿಸುಗಳ ಮೂಲಕ ಮನೆ ಮಾತಾಗಿರುವ ಬರ್ಗರ್ ಲಾಂಜ್‌ನ 9ನೆ ಮಳಿಗೆಯು ಉಡುಪಿ ಜಿಲ್ಲೆ ಮಣಿಪಾಲ ರಸ್ತೆಯ ಲಕ್ಷ್ಮೀಂದ್ರನಗರದಲ್ಲಿರುವ ಗ್ರೀನ್‌ವೀವ್ ಕಟ್ಟಡದಲ್ಲಿ ಸೆ.10ರಂದು ಉದ್ಘಾಟನೆಗೊಳ್ಳಲಿದೆ.

ಮೀನುಗಾರಿಕಾ, ಯುವಸೇವೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ನೂತನ ಮಳಿಗೆಯ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯ ಅಧ್ಯಕ್ಷ ಎಂ.ಎ.ಗಫೂರ್, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಮಣಿಪಾಲ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಸುದರ್ಶನ್ ಎಂ., ಇನ್‌ಲ್ಯಾಂಡ್ ಬಿಲ್ಡರ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಸಿರಾಜ್ ಅಹ್ಮದ್, ಅಬ್ದುಲ್ಲಾ ಕಂ.ಯ ಎಂಡಿ ಹಾಜಿ ಅಬ್ದುಲ್ಲಾ ಪರ್ಕಳ, ಉಡುಪಿ ನಗರಸಭಾ ಸದಸ್ಯೆ ಲತಾ ಆನಂತ ಶೇರಿಗಾರ್, ಭಾಸ್ಕರ್ ಶೆಟ್ಟಿ ಮಣಿಪಾಲ, ಟೈಮ್‌ಲ್ಯಾಬ್ ಮಂಗಳೂರು ಇದರ ಎಂಡಿ ಹಾಜಿ ಮುಹಮ್ಮದ್ ಇಸ್ಮಾಯೀಲ್, ಡಿಲಕ್ಸ್ ಮಂಗಳೂರು ಇದರ ಹಾಜಿ ಕೆ.ಪಿ.ಅಹ್ಮದ್, ಯುನಿವರ್ಸಲ್ ಕೆಎಸ್‌ಎ ಇದರ ಎಂಡಿ ಅಬ್ದುಲ್ ಲತೀಫ್, ಹಾಜಿ ಅಬ್ದುಲ್ ಮಜೀದ್ ಸಿತಾರ್, ಶೇಖರ್ ಎ. ಶೆಟ್ಟಿ ಮಣಿಪಾಲ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News