ಗುರುಪುರ ಹೋಬಳಿ ಮಂಗಳೂರು ತಾ.ನಲ್ಲಿಯೇ ಉಳಿಸಲು ಸಿಎಂಗೆ ಮನವಿ

Update: 2017-09-09 14:00 GMT

ಮಂಗಳೂರು,ಸೆ.9:ನೂತನವಾಗಿ ರಚನೆಯಾದ ಮೂಡಬಿದಿರೆ ತಾಲೂಕಿನಲ್ಲಿ ಮಂಗಳೂರು ನಗರಕ್ಕೆ ಸಮೀಪವಿರುವ ಗುರುಪುರ ಹೋಬಳಿಯ ಗ್ರಾಮಗಳನ್ನು ಸೇರಿಸುವುದನ್ನು ಕೈಬಿಡುವಂತೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ಮಂಗಳೂರು ಉತ್ತರ ಶಾಸಕ ಮೊದಿನ್ ಬಾವಾ ತಿಳಿಸಿದ್ದಾರೆ.

ಅವರು ಈ ಸಂಬಂಧ ಇಂದು ಗುರುಪುರ ಹೋಬಳಿಯ ಜನಪ್ರತಿನಿಧಿಗಳ ಸಭೆಯನ್ನು ಡಿಸಿಸಿ ಕಚೇರಿಯಲ್ಲಿ ನಡೆಸಿದರು. ಮೂಡಬಿದ್ರಿ ತಾಲೂಕಿನಲ್ಲಿ ಗುರುಪುರ ಹೋಬಳಿಯನ್ನು ಸಂಪೂರ್ಣ ಸೇರಿಸುವುದು ತಿಳಿದುಬಂದಿದೆ. ಆದರೆ ಗುರುಪುರ ಹೋಬಳಿಯ ಬಹುತೇಕ ಗ್ರಾಮಗಳು ಮಂಗಳೂರು ನಗರ ವ್ಯಾಪ್ತಿಯ ಆಸುಪಾಸಿನಲ್ಲೇ ಇದೆ. ಈ ಭಾಗದ ಜನತೆಯ ವಿರೋಧ ಇದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗುವುದು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು, ಸಚಿವರು ಇದನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News