'ವಾರ್ತಾಭಾರತಿ' ವರದಿಗಾರನ ಬಂಧನ: ಪೊಲೀಸರ ಕ್ರಮ ಖಂಡನೀಯ - ಬಿ.ವಿ ರಾಜನ್

Update: 2017-09-09 15:17 GMT

ಮಂಜೇಶ್ವರ,ಸೆ.9: ವಾರ್ತಾಭಾರತಿ ಬಂಟ್ವಾಳ ವರದಿಗಾರನ ಮೇಲೆ ಬಂಟ್ವಾಳ ಪೊಲೀಸರು ಕೇಸು ದಾಖಲಿಸಿ ಬಂಧಿಸಿದ ಘಟನೆ ಇಡೀ ಪ್ರಜಾಪ್ರಭುತ್ವದ ತತ್ವಕ್ಕೂ ಶಾಂತಿಯುತವಾಗಿ ನಡೆಸುವ ಪತ್ರಕರ್ತನ ಹೊಣೆಗಾರಿಕೆಯನ್ನು ತಡೆಯುವ ಉದ್ದೇಶದಿಂದ ಕೂಡಿದ್ದಾಗಿದೆ, ಇದು ಖಂಡನೀಯ. ಸರಕಾರಕ್ಕೆ ಈ ಪೊಲೀಸರ ನಡೆ ತಪ್ಪೆಂದು ಕಂಡಲ್ಲಿ ಕೂಡಲೇ ಆ ಪೊಲೀಸರನ್ನು ಅಮಾನತುಗೊಳಿಸಬೇಕು. ಕೇರಳದಲ್ಲಿ ಇಂತಹಾ ಹಲವು ಘಟನೆಗಳು ನಡೆದಾಗ ಸರಕಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಸಿ.ಪಿ.ಐ ಕಾಸರಗೋಡು ಜಿಲ್ಲಾ ಸಮಿತಿಯ ಜೊತೆ ಕಾರ್ಯದರ್ಶಿ ಬಿ.ವಿ ರಾಜನ್ ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News