ಮಣಿಪಾಲದಲ್ಲಿ ‘ಬರ್ಗರ್ ಲಾಂಜ್’ ಶುಭಾರಂಭ
ಉಡುಪಿ, ಸೆ.10: ಉಡುಪಿ- ಮಣಿಪಾಲ ರಸ್ತೆಯ ಲಕ್ಷ್ಮಿಂದ್ರ ನಗರದ ಗ್ರೀನ್ವೀವ್ ಕಟ್ಟಡದಲ್ಲಿ ಆರಂಭಗೊಂಡ ಪ್ರತಿಷ್ಠಿತ ‘ಬರ್ಗರ್ ಲಾಂಜ್’ನ 9ನೆಯ ಮಳಿಗೆಯನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವಿವಾರ ಉದ್ಘಾಟಿಸಿದರು.
‘ಅಂತಾರಾಷ್ಟ್ರೀಯ ಖ್ಯಾತಿಯ ಮಣಿಪಾಲದಲ್ಲಿ ಉತ್ತಮ ಗುಣಮಟ್ಟದ ಆಹಾರಗಳನ್ನು ನೀಡುವ ಮಳಿಗೆಗಳ ಅವಶ್ಯಕತೆ ಇದ್ದು, ಆ ಕಾರ್ಯವನ್ನು ಬರ್ಗರ್ ಲಾಂಜ್ ಮಾಡಲಿದೆ. ಮುಂದೆ ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡುವ ಕೆಲಸ ಈ ಸಂಸ್ಥೆಯಿಂದ ನಡೆಯಬೇಕು ಎಂದು ಸಚಿವರು ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಚಿವರು ಯುವ ಪ್ರತಿಭೆ ಮಾಸ್ಟರ್ ಮುಹಮ್ಮದ್ ಸ್ವರೂಪ್ ಅವರನ್ನು ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಇನ್ಲ್ಯಾಂಡ್ ಬಿಲ್ಡರ್ಸ್ನ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ಅಬ್ದುಲ್ಲಾ ಕಂಪೆನಿಯ ಆಡಳಿತ ನಿರ್ದೇಶಕ ಹಾಜಿ ಅಬ್ದುಲ್ಲಾ ಪರ್ಕಳ, ರೂಪಾ ಭಾಸ್ಕರ್ ಶೆಟ್ಟಿ ಮಣಿಪಾಲ, ಡಿಲಕ್ಸ್ ಮಂಗಳೂರಿನ ಹಾಜಿ ಕೆ.ಪಿ.ಅಹ್ಮದ್, ಕೆಎಸ್ಎ ಯುನಿವರ್ಸಲ್ನ ಆಡಳಿತ ನಿರ್ದೇಶಕ ಅಬ್ದುಲ್ ಲತೀಫ್, ಶೇಖರ್ ಎ.ಶೆಟ್ಟಿ ಮಣಿಪಾಲ ಶುಭಹಾರೈಸಿದರು.
ಸಂಸ್ಥೆಯ ಪಾಲುದಾರರಾದ ಅಬ್ದುಲ್ ವಾಹಿದ್, ಶಂಶೀರ್, ಶುಹೈಬ್ ಉಪಸ್ಥಿತರಿದ್ದರು.
ಹಾಜಿ ಅಬ್ದುಲ್ ಮಜೀದ್ ಸಿತಾರ್ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ರವಿವಾರ ಸೇರಿದಂತೆ ದಿನದ 12 ಗಂಟೆಗಳ ಕಾಲ ಗ್ರಾಹಕರ ಸೇವೆಗೆ ಲಭ್ಯ ಇರುವ ಬರ್ಗರ್ ಲಾಂಜ್ನಲ್ಲಿ ಫ್ರೆಂಡ್ಸ್ ಕಾರ್ನರ್ ಮತ್ತು ಉಚಿತ ವೈಫೈ ವ್ಯವಸ್ಥೆಯ ಸೌಲಭ್ಯ ಕೂಡ ಇದೆ.