ಸಂಹಿತಾ ಶರ್ಮ ಚೆಸ್, ಕರಾಟೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Update: 2017-09-11 18:01 GMT

ಪುತ್ತೂರು, ಸೆ. 11: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 6ನೆ ತರಗತಿ ವಿದ್ಯಾರ್ಥಿನಿ ಸಂಹಿತಾ ಶರ್ಮ ಶಿಕ್ಷಣ ಇಲಾಖೆಯ ವತಿಯಿಂದ 14ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಚೆಸ್ ಹಾಗೂ ಕರಾಟೆ ಸ್ಪರ್ದೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾಮಟ್ಟದಲ್ಲಿ ಜರಗಿದ ಈ ಎರಡೂ ಸ್ಪರ್ಧೆಗಳಲ್ಲಿ ಪ್ರಥಮಸ್ಥಾನ ಪಡೆದು ಇದೀಗ ಬೆಂಗಳೂರಿನಲ್ಲಿ ಅಕ್ಟೋಬರ್ 13ರಿಂದ 15ರವರೆಗೆ ನಡೆಯುವ ರಾಜ್ಯಮಟ್ಟದ ಕರಾಟೆ ಹಾಗೂ ಮಂಗಳೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ಜರಗುವ ರಾಜ್ಯ ಮಟ್ಟದ ಚೆಸ್ ಸ್ಪರ್ದೆಯಲ್ಲಿ ಇವರು ದಕ್ಷಿಣ ಕನ್ನ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.

ಕರಾಟೆಯಲ್ಲಿ ಸೆನ್ಸಾಯಿ ನಿತಿನ್ ಎನ್. ಸುವರ್ಣ ಅವರು ಸಂಹಿತಾ ಶರ್ಮ ಅವರ ತರಬೇತುದಾರರಾಗಿದ್ದು, ಚೆಸ್‌ನಲ್ಲಿ ಜೀನಿಯಸ್ ಚೆಸ್‌ಸ್ಕೂಲಿನ ಶ್ರೀ ಸತ್ಯಪ್ರಸಾದ ಕೋಟೆ ತರಬೇತಿ ನೀಡಿದ್ದಾರೆ. ಸಂಹಿತಾ ಶರ್ಮ ಪುತ್ತೂರಿನ ರಾಜೇಶ್ ಶರ್ಮ ಹಾಗೂ ಸೀಮಾ ದಂಪತಿಗಳ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News