ಮನೆಯಿಂದ ಚಿನ್ನಾಭರಣ ಕಳವು

Update: 2017-09-13 17:12 GMT

ಮಂಗಳೂರು, ಸೆ. 13: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣವನ್ನು ದೋಚಿರುವ ಘಟನೆ ಕಂಕನಾಡಿಯಲ್ಲಿ ಬುಧವಾರ ನಡೆದಿದೆ.

ಕಂಕನಾಡಿ ರೆಡ್ ನೇತ್ರಾವತಿ ಲೇ ಔಟ್ ಬಡಾವಣೆಯಲ್ಲಿರುವ ಪ್ರಕಾಶ್ ಎಂಬವರ ಮನೆಯಿಂದ ಚಿನ್ನಾಭರಣ ಕಳವು ಆಗಿರುವ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮನೆಯ ಮುಂಭಾಗದ ಕಬ್ಬಿಣದ ರಾಕ್ಷ ಕವಚದ ಗ್ರಿಲ್‌ನ್ನು ತುಂಡರಿಸಿ ಮನೆಯ ಒಳ ಪ್ರವೇಶಿಸಿ ಬೆಡ್‌ರೂಂನ ಕಪಾಟಿನಲ್ಲಿದ್ದ ಪ್ರಕಾಶ್ ಅವರ ಪತ್ನಿಯ ಬಂಗಾರ ಕರಿಮಣಿ ಸರ-1, ಮಾಂಗಲ್ಯ ಸರ-1, ಕಿವಿ ಒಲೆ -1 ಜೊತೆ, ಕೈ ಬೆರಳ ಉಂಗುರ-1ನ್ನು ಕಳವು ಮಾಡಿದ್ದಾರೆ.

ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ. 2,82,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News