ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಸ್ಪರ್ಧೆ
Update: 2017-09-15 13:52 GMT
ಉಡುಪಿ, ಸೆ.15: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ಹಂತಗಳಲ್ಲಿ ಮುದ್ದುಕೃಷ್ಣ ವೇಷ, ಕೃಷ್ಣನ ಭಜನೆ, ಕೃಷ್ಣನ ಕತೆ ಹೇಳುವುದು ಮತ್ತು ಶ್ರೀಕೃಷ್ಣನ ಕುರಿತು ರಸಪ್ರಶ್ನೆ ಸ್ಪರ್ಧೆಗಳು ಇತ್ತೀಚೆಗೆ ಬೈಲೂರು ವಾಸುದೇವಕೃಪಾ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸ ಲಾಗಿತ್ತು.
ಸ್ಪರ್ಧೆಯನ್ನು ಶಾಲಾ ಸಂಚಾಲಕ ಕೆ.ಅಣ್ಣಪ್ಪಶೆಣೈ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಅಮಿತಾಂಜಲಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಪ್ರಿಯಾ ಎ.ನಾಯಕ್ ಉಪಸ್ಥಿತರಿದ್ದರು. ನೊರಿನ್ ಕಾರ್ಯಕ್ರಮ ನಿರೂಪಿಸಿದರು.