ಪ್ರಬಂಧ ಮಂಡನೆ
Update: 2017-09-15 13:54 GMT
ಉಡುಪಿ, ಸೆ.15: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ನಾಗರಾಜ ಭಟ್ ಬ್ರೆಜಿಲ್ನ ಫ್ಲೋರಿಯನೋ ಪೋಲಿಸ್ನಲ್ಲಿ ಸೆ.11ರಿಂದ 15ರವರೆಗೆ ನಡೆದ 7ನೆ ಅಂತಾರಾಷ್ಟ್ರೀಯ ಡಬ್ಲ್ಯುಎಂಓ ಸಮ್ಮೇಳನದಲ್ಲಿ ಭಾಗವಹಿಸಿ ‘ಎ ಕಂಪಾರಿಟಿವ್ ಅನಾಲಿಸಿಸ್ ಆಫ್ ಕ್ಲೈಮೇಟ್ ಚೇಂಜ್ ಓವರ್ ಥರ್ಮಲ್ ಪವರ್ ಪ್ಲಾಂಟ್ ಯುಸಿಂಗ್ ರಿಅನಾಲಿಸಿಸ್ ಆಂಡ್ ಸಾಟೆಲೈಟ್ ಡಾಟಾ’ ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು.
ಇವರಿಗೆ ಬೆಂಗಳೂರಿನ ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನಾ ಪರಿಷತ್ತಿನ ಹಿರಿಯ ವಿಜ್ಞಾನಿ ಡಾ.ಕೆ.ಸಿ.ಗೌಡ ಈ ಸಂಶೋಧನೆಯಲ್ಲಿ ಮಾರ್ಗದರ್ಶನ ನೀಡಿದ್ದರು.