ಸೆ.17: ಈದ್ ಸೌಹಾರ್ದ ಕೂಟ

Update: 2017-09-15 14:24 GMT

ಮಂಗಳೂರು, ಸೆ.15: ಜಮಾಅತೆ ಇಸ್ಲಾಮೀ ಹಿಂದ್ ಪಕ್ಕಲಡ್ಕ ಮತ್ತು ಹ್ಯೂಮನ್ ವೆಲ್ಫೇರ್ ಟ್ರಸ್ಟ್ ಪಕ್ಕಲಡ್ಕ ಇದರ ವತಿಯಿಂದ ಈದ್ ಸೌಹಾರ್ದ ಕೂಟವು ಸೆ.17ರಂದು ಬೆಳಗ್ಗೆ 10:30ಕ್ಕೆ ಪಕ್ಕಲಡ್ಕದ ಸ್ನೇಹ ಪಬ್ಲಿಕ್ ಸ್ಕೂಲ್‌ನ ಮರ್‌ಹೂಮ್ ಇಬ್ರಾಹಿಂ ಸಈದ್ ಅಡಿಟೋರಿಯಂ ನಡೆಯಲಿದೆ.

ಮೇಯರ್ ಕವಿತಾ ಸನಿಲ್, ಶಾಸಕ ಜೆ. ಆರ್ ಲೋಬೊ , ಕಾರ್ಪೋರೇಟರ್‌ಗಳಾದ ಪ್ರವೀಣ್ ಚಂದ್ರ ಆಳ್ವ, ಸುಮಯ್ಯ, ಇನ್‌ಸ್ಪೆಕ್ಟರ್ ರವಿನಾಯಕ್, ಫಾ.ಸಿರಿಲ್ ಪಿಂಟೊ ಭಾಗವಹಿಸುವರು. ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಸಲಹಾ ಸಮಿತಿಯ ಸದಸ್ಯ ಮುಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News