ರುಡ್‌ಸೆಟ್ ಸಂಸ್ಥೆಯ ಕಿರು ಹೊತ್ತಿಗೆ ಬಿಡುಗಡೆ

Update: 2017-09-16 14:23 GMT

ಬೆಳ್ತಂಗಡಿ, ಸೆ. 16: ರುಡ್‌ಸೆಟ್ ಸಂಸ್ಥೆ ಉಜಿರೆ ಶಾಖೆಯ ಜಿಲ್ಲಾ ಮಟ್ಟದ ರುಡ್‌ಸೆಟಿ ಸಲಹಾ ಸಮಿತಿಯ ಸಭೆ ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ರುಡ್‌ಸೆಟ್ ಸಂಸ್ಥೆಯ ಮಾಹಿತಿಯನ್ನೊಳಗೊಂಡ ಪರಿಷ್ಕೃತ ಕನ್ನಡ ಕಿರು ಹೊತ್ತಿಗೆಯನ್ನು ಡಾ. ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ಈ ಸಂದರ್ಭ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್, ರುಡ್‌ಸೆಟ್ ಸಲಹಾ ಸಮಿತಿ ಸದಸ್ಯ ಕಾಶ್ಮೀರಿ ಮಿನೇಜಸ್, ಕೆನರಾ ಬ್ಯಾಂಕಿನ ಎಜಿಎಂ ವಸಂತ ಶೆಟ್ಟಿ, ಸಿಂಡಿಕೇಟ್ ಬ್ಯಾಂಕಿನ ಡಿಜಿಎಂ ಸೀತಾರಾಮ ಸೋಮಯಾಜಿ, ಉಜಿರೆ ಶಾಖೆಯ ಪ್ರಬಂಧಕ ಶ್ರೀನಿವಾಸ, ಲೀಡ್ ಜಿಲ್ಲಾ ಎಲ್‌ಡಿಎಂ ರಾಘವ, ನಬಾರ್ಡ್ ಡಿಡಿಎಂ ಎಸ್. ರಮೇಶ್, ರುಡ್‌ಸೆಟ್ ಕಾರ್ಯನಿರ್ವಾಹಕ ನಿರ್ದೇಶಕ ಎಂ. ಜನಾರ್ಧನ, ನಿರ್ದೇಶಕ ಅಜಿತ್ ರಾಜಣ್ಣನವರ್, ಹಿರಿಯ ಉಪನ್ಯಾಸಕ ಜೇಮ್ಸ್ ಅಬ್ರಾಹಂ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News