ಮನೆಗೆ ನುಗ್ಗಿ 2ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

Update: 2017-09-16 17:02 GMT

ಶಂಕರನಾರಾಯಣ, ಸೆ.16: ಆಜ್ರಿ ಗ್ರಾಮದ ಮನೆಯೊಂದಕ್ಕೆ ಸೆ.16ರಂದು ಬೆಳಗ್ಗೆ 9ಗಂಟೆ ಸುಮಾರಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.

ಮಹಾಬಲ ಹಾಂಡ ಎಂಬವರ ಪತ್ನಿ ಮಾಲತಿ ಎಂ.ಕುಲಾಲ ಸೊಪ್ಪು ತರಲು ಹಾಡಿಗೆ ಹೋಗಿದ್ದ ವೇಳೆ ಮನೆಯ ಹಿಂದಿನ ಬಾಗಿಲಿನಿಂದ ಒಳನುಗ್ಗಿದ ಕಳ್ಳರು, ಬೆಡ್‌ರೂಂನಲ್ಲಿಟ್ಟಿದ್ದ 2 ಚಿನ್ನದ ಕರಿಮಣಿ ಬಳೆ, 2ಉಂಗುರ ಮತ್ತು ಕೋಣೆ ಯಲ್ಲಿ ಮರದ ಪೆಟ್ಟಿಗೆಯಲ್ಲಿ ಇಟ್ಟಿದ್ದ ಅವರ ತಾಯಿಯ 2 ಚಿನ್ನದ ಬಳೆ, 1 ಕೊತ್ತಂಬರಿ ಸರ, 2 ಉಂಗುರ ಹಾಗೂ ವ್ಯಾನಿಟಿ ಬ್ಯಾಗಿನಲ್ಲಿಟ್ಟಿದ್ದ 13,000ರೂ. ನಗದು ಹಣವನ್ನು ಕಳವು ಮಾಡಿದ್ದಾರೆ.

ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ 2,00,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಂಕರನಾರಾ ಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯು ತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News