ಪರಸ್ಪರ ಹೊಡೆದಾಟ: ನಾಲ್ವರು ಬಸ್ ಸಿಬ್ಬಂದಿಗಳ ಸೆರೆ
Update: 2017-09-16 17:04 GMT
ಕೋಟ, ಸೆ.16: ಕೋಟ ಮೂರು ಕೈ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೆ.16ರಂದು ಬೆಳಗ್ಗೆ 9:45ರ ಸುಮಾರಿಗೆ ಸಮಯದ ವಿಚಾರವಾಗಿ ಬಸ್ ಗಳನ್ನು ರಸ್ತೆಯಲ್ಲಿ ನಿಲ್ಲಿಸಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದ ನಾಲ್ವರು ಬಸ್ ಸಿಬ್ಬಂದಿಗಳನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುವ ಶ್ರೀದುರ್ಗಾಂಬಾ ಬಸ್ನ ಚಾಲಕ ಸಾಬು ಹಾಗೂ ನಿರ್ವಾಹಕ ಅಣ್ಣಪ್ಪಪೂಜಾರಿ ಮತ್ತು ಅದೇ ಮಾರ್ಗದ ಭಾರತಿ ಬಸ್ನ ಚಾಲಕ ಪ್ರಕಾಶ್ ಹಾಗೂ ನಿರ್ವಾಹಕ ನಿಶುರಾಜು ಆಚಾರ್ ಎಂಬವರು ಬಂಧಿತ ಆರೋಪಿಗಳು.