​ಪಣಂಬೂರು: ವಿದ್ಯಾರ್ಥಿ ಸಮುದ್ರಪಾಲು

Update: 2017-09-17 15:46 GMT

ಮಂಗಳೂರು, ಸೆ. 17: ಪಣಂಬೂರು ಬಳಿಯ ಮೀನಕಳಿ ಎಂಬಲ್ಲಿ ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಯೋರ್ವ ನೀರು ಪಾಲಾಗಿರುವ ಘಟನೆ ರವಿವಾರ ಸಂಜೆ ನಡೆದಿದೆ.

ಮೂಲತಃ ಆಂದ್ರಪ್ರದೇಶದ ಪ್ರಸ್ತುತ ಬೆಂಗಳೂರಿನಲ್ಲಿ ಎಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಾಯಿ ಚರಣ್ (19) ನೀರು ಪಾಲಾಗಿರುವ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಸಾಯಿ ಚರಣ್ ಮತ್ತು ಆತನ ಸ್ನೇಹಿತರಾದ ಬೆಂಗಳೂರಿನ ವಂಶಿ, ಚಂದನ್ ಮತ್ತು ನವೀನ್ ಎಂಬವರು ಇಂದು ಪಣಂಬೂರು ಬಳಿಯ ಮೀನಕಳಿ ಎಂಬಲ್ಲಿ ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದರೆಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಸಾಯಿ ಚರಣ್ ಸಮುದ್ರ ಅಲೆಗಳ ಸೆಳೆತಕ್ಕೆ ಒಳಗಾಗಿ ನೀರು ಪಾಲಾಗಿದ್ದಾರೆ.
ಕೋಸ್ಟ್‌ಗಾರ್ಡ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಇದ್ದು, ವಿದ್ಯಾರ್ಥಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News