​ಕಾರು ಅಪಘಾತ: ಐವರಿಗೆ ಗಾಯ

Update: 2017-09-17 15:50 GMT

ಬ್ರಹ್ಮಾವರ, ಸೆ.17: ರಸ್ತೆ ದಾಟುತ್ತಿದ್ದ ನಾಯಿಯನ್ನು ತಪ್ಪಿಸಲು  ಬ್ರೇಕ್ ಹಾಕಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಹುತ್ತಕ್ಕೆ ಢಿಕ್ಕಿ ಹೊಡೆದು ಐದು ಮಂದಿ ಗಾಯಗೊಂಡ ಘಟನೆ ನೀಲಾವರ ಗೋ ಶಾಲೆಯ ಹಿಂಬದಿ ನೀಲಾವರ ಗುಡ್ಡೆ ಎಂಬಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ನಡೆದಿದೆ.

ಸುದರ್ಶನ್ ತನ್ನ  ಕಾರನ್ನು ಚಾಂತಾರುವಿನಿಂದ ನೀಲಾವರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಈ ಘಟನೆ ಸಂಭವಿಸಿದ್ದು, ಅಪಘಾತ ದಿಂದ ಕಾರಿನಲ್ಲಿದ್ದ ಮಂಗಳೂರು ಕಾವೂರಿನ ಲೀಲಾವತಿ, ವಾಸುದೇವ ಭಟ್, ಗೀತಾ, ಶ್ರೀಶ ಮತ್ತು ಅನಿರುದ್ದ ಎಂಬವರು ಗಾಯಗೊಂಡು ಬ್ರಹ್ಮಾವರ ಖಾಸಗಿ ಅಸ್ವತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News