ವೇಶ್ಯಾವಾಟಿಕೆ ದಂಧೆ: ನಾಲ್ವರು ಆರೋಪಿಗಳ ಸೆರೆ

Update: 2017-09-18 17:05 GMT

ಮಂಗಳೂರು, ಸೆ. 18: ನಗರದ ಯೆಯ್ಯಡಿಯ ಫ್ಲಾಟೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ ದಾಳಿ ನಡೆಸಿದ ಕದ್ರಿ ಪೊಲೀಸರು 4 ಮಂದಿಯನ್ನು ಬಂಧಿಸಿ, ಯುವತಿಯರನ್ನು ರಕ್ಷಿಸಿದ್ದಾರೆ.

ಮನೆ ಮಾಲಕಿ ಉಷಾ ನಾಯ್ಕಾ, ಮರೋಳಿ ಸೀತಾರಾಮ್‌ ಮತ್ತಿಬ್ಬರು ಯುವತಿಯರನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಹರೀಶ್ ಎಂಬಾತ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ದಂಧೆಯ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಕದ್ರಿ ಪೊಲೀಸರು ಸೋಮವಾರ ಮಧ್ಯಾಹ್ನ 3 ಗಂಟೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಯಾ ಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಮಾರುತಿ ನಾಯಕ್, ಪಿಎಸ್‌ಐ ಹರೀಶ್, ಎಎಸ್‌ಐ ಜನಾರ್ದನ್, ಹೆಚ್‌ಸಿ ಪ್ರಶಾಂತ್ ಶೆಟ್ಟಿ, ಹೆಚ್‌ಸಿ ಆಶೀತ್ ಕಿರಣ್, ಪಿಸಿ ಕುಮಾರಿ ಜ್ಯೋತಿ, ಅಜಿತ್ ಮ್ಯಾಥ್ಯೂ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News