​ಬೆಂಕಿ ಆಕಸ್ಮಿಕ: ಗಾಯಾಳು ಮೃತ್ಯು

Update: 2017-09-19 17:34 GMT

ಗಂಗೊಳ್ಳಿ, ಸೆ.19: ಬೆಂಕಿ ಆಕಸ್ಮಿಕದಿಂದ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಮರವಂತೆಯ ಕುಪ್ಪುದೇವಾಡಿಗ(77) ಎಂದು ಗುರುತಿಸಲಾಗಿದೆ. ಸೆ.3ರಂದು ಸಂಜೆ 6ಗಂಟೆಗೆ ಮನೆಯ ಬಚ್ಚಲು ಒಲೆಯಲ್ಲಿ ಬೆಂಕಿ ಹಿಡಿಸುವಾಗ ಆಕಸ್ಮಿಕವಾಗಿ ಬೆಂಕಿ ಕುಪ್ಪು ದೇವಾಡಿಗರ ಸೀರೆ ತಗಲಿತು. ಇದರಿಂದ ಗಂಭೀರ ಸುಟ್ಟ ಗಾಯಗಳೊಂದಿಗೆ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಸೆ.19ರಂದು ನಸುಕಿನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News