ವ್ಯಕ್ತಿತ್ವ ವಿಕಸನ -ಭಾಷಾ ಕೌಶಲ್ಯ ಕಾರ್ಯಕ್ರಮ
Update: 2017-09-20 13:35 GMT
ಉಡುಪಿ, ಸೆ.20: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಮ್ಯಾನೇಜ್ ಮೆಂಟ್ ಅಸೋಸಿಯೇಶನ್ ಮತ್ತು ಎನ್ಎಸ್ಎಸ್ನ ಸಹಯೋಗದೊಂದಿಗೆ ವ್ಯಕ್ತಿತ್ವ ವಿಕಸನ ಹಾಗೂ ಭಾಷಾ ಕೌಶಲ್ಯ ಎಂಬ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜೈಕಿಶನ್ ಭಟ್ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ವಹಿಸಿದ್ದರು. ಎನ್ನೆಸ್ಸೆಸ್ ಅಧಿಕಾರಿ ಅನುಪಮಾ ಜೋಗಿ, ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥ ಪ್ರೊ.ಮರ್ವಿನ್ ಡಿಸೋಜ, ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಸಂಯೊೀ ಜಕಿ ಸಾವಿತ್ರಿ ಎಸ್. ಉಪಸ್ಥಿತರಿದ್ದರು.