ಸ್ವಾತಂತ್ರ್ಯ ಹೋರಾಟಗಾರ ಕೆ. ಮಾಧವನ್ ಸ್ಮರಣಾರ್ಥ ಕಾರ್ಯಕ್ರಮ

Update: 2017-09-24 14:39 GMT

ಕಾಸರಗೋಡು, ಸೆ. 24: ಸ್ವಾತಂತ್ರ್ಯ ಹೋರಾಟಗಾರ  ಕೆ. ಮಾಧವನ್ ಸ್ಮರಣಾರ್ಥ ಪ್ರಥಮ ಪುರಸ್ಕಾರವನ್ನು  ರವಿವಾರ  ಕಾಞoಗಾಡ್ ನಲ್ಲಿ ನಡೆದ ಸಮಾರಂಭದಲ್ಲಿ  ಪ್ರದಾನ ಮಾಡಲಾಯಿತು. 

ಕೆ .ಮಾಧವನ್ ರವರ ಪ್ರಥಮ ಸಂಸ್ಮರಣಾ  ದಿನಾಚರಣೆಯಂಗವಾಗಿ ನಡೆದ ಸಮಾರಂಭದಲ್ಲಿ ಕೇರಳ ಶಿಕ್ಷಣ ಸಚಿವ ಪ್ರೊ. ಸಿ . ರವೀಂದ್ರನಾಥ್  ರವರು ಕನಯ್ಯ ಕುಮಾರ್ ರವರಿಗೆ  ಪುರಸ್ಕಾರವನ್ನು ಪ್ರದಾನ ಮಾಡಿದರು.

ಕೆ. ಮಾಧವನ್  ಫೌಂಡೇಶನ್   ಅಧ್ಯಕ್ಷ  ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ರಾಜ್ಯ ಕಾರ್ಯದರ್ಶಿ   ಕಾನಂ ರಾಜೇಂದ್ರನ್ , ಸಂಸದ ಪಿ . ಕರುಣಾಕರನ್ ,  ನಗರಸಭಾ ಅಧ್ಯಕ್ಷ  ಕೆ . ಪಿ ಜಯರಾಜನ್ ,  ಗೋವಿಂದನ್ ಪಾಲಿಕಾಪಿಲ್ , ಕೆ .ಪಿ ಸತೀಷ್ಚಂದ್ರನ್,  ಡಾ . ಸಿ . ಬಾಲನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News