ಸ್ವಾತಂತ್ರ್ಯ ಹೋರಾಟಗಾರ ಕೆ. ಮಾಧವನ್ ಸ್ಮರಣಾರ್ಥ ಕಾರ್ಯಕ್ರಮ
Update: 2017-09-24 14:39 GMT
ಕಾಸರಗೋಡು, ಸೆ. 24: ಸ್ವಾತಂತ್ರ್ಯ ಹೋರಾಟಗಾರ ಕೆ. ಮಾಧವನ್ ಸ್ಮರಣಾರ್ಥ ಪ್ರಥಮ ಪುರಸ್ಕಾರವನ್ನು ರವಿವಾರ ಕಾಞoಗಾಡ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಕೆ .ಮಾಧವನ್ ರವರ ಪ್ರಥಮ ಸಂಸ್ಮರಣಾ ದಿನಾಚರಣೆಯಂಗವಾಗಿ ನಡೆದ ಸಮಾರಂಭದಲ್ಲಿ ಕೇರಳ ಶಿಕ್ಷಣ ಸಚಿವ ಪ್ರೊ. ಸಿ . ರವೀಂದ್ರನಾಥ್ ರವರು ಕನಯ್ಯ ಕುಮಾರ್ ರವರಿಗೆ ಪುರಸ್ಕಾರವನ್ನು ಪ್ರದಾನ ಮಾಡಿದರು.
ಕೆ. ಮಾಧವನ್ ಫೌಂಡೇಶನ್ ಅಧ್ಯಕ್ಷ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ , ಸಂಸದ ಪಿ . ಕರುಣಾಕರನ್ , ನಗರಸಭಾ ಅಧ್ಯಕ್ಷ ಕೆ . ಪಿ ಜಯರಾಜನ್ , ಗೋವಿಂದನ್ ಪಾಲಿಕಾಪಿಲ್ , ಕೆ .ಪಿ ಸತೀಷ್ಚಂದ್ರನ್, ಡಾ . ಸಿ . ಬಾಲನ್ ಮೊದಲಾದವರು ಉಪಸ್ಥಿತರಿದ್ದರು.