ಉಪ್ಪಿನಂಗಡಿಯಲ್ಲಿ ಸರಣಿ ಕಳ್ಳತನ
Update: 2017-09-27 05:52 GMT
ಉಪ್ಪಿನಂಗಡಿ, ಸೆ.27: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಬ್ಯಾಂಕ್ ರಸ್ತೆಯಲ್ಲಿರುವ ಹಲವು ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಇಲ್ಲಿ ಸರಕಾರಿ ಕಾಲೇಜಿಗೆ ನುಗ್ಗಿ ಕಪಾಟುಗಳನ್ನು ಜಾಲಾಡಿರುವ ಕಳ್ಳರು, ಅಲ್ಲೇನು ದೊರೆಯದಿದ್ದಾಗ ಸಿಸಿಟಿವಿ ಕ್ಯಾಮರಾದ ಡಿವಿಆರ್ನ್ನೇ ಕಳವುಗೈದಿದ್ದಾರೆ. ಬಳಿಕ ಬ್ಯಾಂಕ್ ರಸ್ತೆಯಲ್ಲಿನ ಕೊಗ್ಗಣ್ಣ ಕಿಣಿ ಮರ್ಚೆಂಟ್ ಅಂಗಡಿ, ಅಚ್ಯುತ್ ಪಡಿಯಾರ್ ಎಂಬವರ ಝೆರಾಕ್ಸ್ ಅಂಗಡಿ, ಸಫಾ ಫರ್ನಿಚರ್ ಮಳಿಗೆ, ಎಂ.ಎಂ.ಎಸ್. ಟ್ರೇಡರ್ಸ್ಗಳಿಗೂ ಕಳ್ಳರು ನುಗ್ಗಿದ್ದಾರೆ. ಈ ಎಲ್ಲಾ ಅಂಗಡಿಗಳಿಂದ ಒಟ್ಟು ಸುಮಾರು 14 ಸಾವಿರ ರೂ. ನಗದನ್ನು ಕಳವುಗೈಯಲಾಗಿದೆ. ಇದೇ ಸಂದರ್ಭ ಇಲ್ಲಿನ ಶ್ರೀಧರ್ ಜ್ಯುವೆಲ್ಲರಿಗೆ ನುಗ್ಗಲು ಕಳ್ಳರು ವಿಫಲ ಯತ್ನ ನಡೆಸಿದ್ದಾರೆ.
ಈ ಕಳವು ಯತ್ನ ನಿನ್ನೆ ತಡರಾತ್ರಿ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ.