ಕೊಲೆ ಪ್ರಕರಣ: ಆರೋಪಿಯ ಬಂಧನ

Update: 2017-09-27 14:56 GMT

ಮಂಜೇಶ್ವರ, ಸೆ. 27: ಪೊಲೀಸ್ ಕಾರ್ಯಾಚರಣೆ ವೇಳೆ ಹೊಳೆಗೆ ಹಾರಿ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣ ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಉಳುವಾರು ನಿವಾಸಿ ಓನಂದ ಲತೀಫ್ (34) ಎಂದು ಗುರುತಿಸಲಾಗಿದೆ. ಕಟ್ಟತ್ತಡ್ಕದಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ಕುಂಬಳೆ ಎಸ್.ಐ ಜಯಶಂಕರ್, ಎ.ಎಸ್.ಐ ಶಿವದಾಸನ್, ಪ್ರೊಬೆಷನರಿ ಎಸ್.ಐ ಶಾಜಿ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಆರಿಕ್ಕಾಡಿಯ ಸಮೀರ್ ಕೊಲೆ ಪ್ರಕರಣದ ಆರೋಪಿಯಾಗಿರುವ ಲತೀಫ್ ಮರಳು ಸಾಗಾಟ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಕಳೆದ ತಿಂಗಳ 21 ರಂದು ಮರಳು ಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಲತೀಫ್ ನನ್ನು ಬಂಧಿಸಲು ಹೆಚ್ಚುವರಿ ಎಸ್.ಐ ಶಿವದಾಸನ್ ನೇತೃತ್ವದ ಪೊಲೀಸ್ ತಂಡ ಲತೀಫ್ ನ ಮನೆಗೆ ತೆರಳಿದ್ದ ವೇಳೆ ಈತ ಕರ್ತವ್ಯಕ್ಕೆ ಅಡ್ಡಿಪಡಿಸಿ ಮನೆ ಸಮೀಪದ ಹೊಳೆಗೆ ಹಾರಿ ತಲೆಮರೆಸಿಕೊಂಡಿದ್ದ. ಇದೇ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News