ಬಸ್ ಕಂಡೆಕ್ಟರ್‌ಗೆ ಹಲ್ಲೆ

Update: 2017-09-27 16:13 GMT

ಮಂಗಳೂರು, ಸೆ.27: ಬಸ್‌ನಲ್ಲಿ ಮಹಿಳೆಗೆ ಕಿರುಕುಳ ನೀಡುತ್ತಿರುವುದನ್ನು ಆಕ್ಷೇಪಿಸಿದ ಬಸ್ ಕಂಡೆಕ್ಟರ್‌ಗೆ ಯುವಕನೊಬ್ಬ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದೆ.

ಸುರತ್ಕಲ್ ಬಳಿಯ ಕಾನ ಎಂಬಲ್ಲಿ ಬಸ್‌ನಲ್ಲಿದ್ದ ಮಹಿಳೆಯೊಂದಿಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ. ಬಸ್ ಕಂಡೆಕ್ಟರ್ ಕಿರಣ್ ಇದನ್ನು ಪ್ರಶ್ನಿಸಿದ್ದ. ಈ ಸಂದರ್ಭ ಸಿಟ್ಟುಗೊಂಡ ಯುವಕ ಕಂಡೆಕ್ಟರ್‌ಗೆ ಬಸ್‌ನಲ್ಲೇ ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಿ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ದೂರಲಾಗಿದೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News