ಕುದ್ರೋಳಿ: ವಿನಾಕಾರಣ ವ್ಯಕ್ತಿಗೆ ಹಲ್ಲೆ ನಡೆಸಿದ ತಂಡ

Update: 2017-09-29 17:26 GMT
ಬಂದರ್ ಪೊಲೀಸ್ ಠಾಣೆಯ ಮುಂಭಾಗ ಜನರು ಜಮಾಯಿಸಿರುವುದು.

ಮಂಗಳೂರು, ಸೆ.29: ಓಮ್ನಿಯಲ್ಲಿ ಆಗಮಿಸಿದ ತಂಡವೊಂದು ಮಸೀದಿಯ ಖತೀಬ್ ಒಬ್ಬರಿಗೆ ವಿನಾಕಾರಣ ಹಲ್ಲೆ ನಡೆಸಿರುವ ಘಟನೆ ಕುದ್ರೋಳಿ ಜಂಕ್ಷನ್ ನಲ್ಲಿ ನಡೆದಿದೆ.

ಕುದ್ರೋಳಿ ಟಿಪ್ಪು ಸುಲ್ತಾನ್ ಸಲಫಿ ಮಸೀದಿಯ ಖತೀಬ್ ಶಾಕಿಬ್ ಸಲೀಂ ಉಮ್ರಿ (32) ಹಲ್ಲೆಗೊಳಗಾದವರು. ಇವರು ಮೆಡಿಕಲ್ ಶಾಪೊಂದಕ್ಕೆ ತೆರಳಿ ಅಲ್ಲಿಂದ ದ್ವಿಚಕ್ರ ವಾಹನದಲ್ಲಿ ಹಿಂತಿರುಗುತ್ತಿದ್ದ ಸಂದರ್ಭ ಓಮ್ನಿಯಲ್ಲಿ ಬಂದ ತಂಡವೊಂದು ವಿನಾಕಾರಣ ಹಲ್ಲೆ ನಡೆಸಿದೆ. ಓಮ್ನಿಯಲ್ಲಿ ನಾಲ್ಕು ಮಂದಿ ಇದ್ದರು ಎನ್ನಲಾಗಿದೆ. ಈ ಸಂದರ್ಭ ಹಲ್ಲೆ ನಡೆಸಿದ್ದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ತಂಡ ಕಾರಿನಲ್ಲಿ ಪರಾರಿಯಾಗಿದೆ.

ಈ ಓಮ್ನಿಯನ್ನು ಸ್ಥಳೀಯರು ಹಿಂಬಾಲಿಸಿದ್ದು, ಗಾಜುಗಳನ್ನು ಒಡೆದಿದ್ದಾರೆ ಎಂದು ಹೇಳಲಾಗಿದೆ. ಆದರೆ ತಂಡ ಪರಾರಿಯಾಗಿದೆ. ಓಮ್ನಿಯ ನಂಬರ್ ಪತ್ತೆಯಾಗಿದೆ ಎನ್ನಲಾಗಿದ್ದು, ಇದು ಉಪ್ಪಿನಂಗಡಿ ಮೂಲದ ಕಾರು ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ಥಳೀಯರು ಬಂದರ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News