ಅ.1ರಂದು ಕಲಾ ಸಮಾಲೋಚನೆ
Update: 2017-09-30 15:53 GMT
ಉಡುಪಿ, ಸೆ.30: ಮಕ್ಕಳ ಕಲಾ ಚೈತನ್ಯವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮಣಿಪಾಲದ ತ್ರಿವರ್ಣ ಕಲಾ ಕೇಂದ್ರವು ವಿದ್ಯಾರ್ಥಿ-ಪೋಷಕರಿಗೆ ತ್ರಿವರ್ಣ ಸಂಗಮ ಎಂಬ ಸಮಾಲೋಚನಾ ಕಾರ್ಯಕ್ರಮವನ್ನು ಅ.1ರಂದು ಅಪರಾಹ್ನ 3:00 ಗಂಟೆಗೆ ಆಯೋಜಿಸಿದೆ.
ಕಾರ್ಯಕ್ರಮವನ್ನು ಕೋಟ ಆಶ್ರಿತ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಶಿಕಾಂತ್ ಎಸ್. ಶೆಟ್ಟಿ ಉದ್ಘಾಟಿಸುವರು. ಅತಿಥಿಗಳಾಗಿ ಉಡುಪಿ ಡಾ. ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ.ವಿರುಪಾಕ್ಷ ದೇವರುಮನೆ ಅವರು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಕರ್ನಾಟಕ ಬ್ಯಾಂಕ್ನ ಅಧಿಕಾರಿವಿಶ್ವಾಸ್ ಎ.ಬೊರೊವಾಂಕರ್ ಮತ್ತು ಕುಂದಾಪುರ ಕೋಣಿಯ ಮಾತಾ ಮೋಂಟೆಸ್ಸೊರಿಯ ಪ್ರಾಂಶುಪಾಲೆ ಭಾರತಿ ಪ್ರಕಾಶ್ ಶೆಟ್ಟಿ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಕಲಿಕಾ ವಿದ್ಯಾರ್ಥಿಗಳ ಚಿತ್ರಕಲಾ ಅನಾವರಣ ಹಾಗೂ ವಿದ್ಯಾರ್ಥಿನಿಯರ ಜಲವರ್ಣ ನಿಸರ್ಗ ಚಿತ್ರಣದ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ತ್ರಿವರ್ಣ ಕಲಾ ಕೇಂದ್ರದ ಪ್ರಕಟಣೆ ತಿಳಿಸಿದೆ.