ಅ.2: ಹಕ್ಕೊತ್ತಾಯ ಚಳವಳಿ

Update: 2017-10-01 13:58 GMT

ಮಂಗಳೂರು, ಅ.1: ಮಂಗಳೂರು ಮಹಾನಗರ ಪಾಲಿಕೆಯ ಎದುರು ನಿವೇಶನರಹಿತರ ಹೋರಾಟ ಸಮಿತಿ ಜಿ+3 ಮಾದರಿಯಲ್ಲಿ ಶಕ್ತಿನಗರ ಹಾಗೂ ಇಡ್ಯಾ, ಸುರತ್ಕಲ್‌ನಲ್ಲಿ ಮನೆ ನಿರ್ಮಿಸಲು, ಕಣ್ಣೂರಿನ ಕನ್ನಗುಡ್ಡೆಯ 11.25 ಎಕ್ರೆ ಜಾಗದ ಅರ್ಹ ನಿವೇಶನರಹಿತರ ಪಟ್ಟಿ ತಯಾರಿಸಲು, ಉಳಿದ ನಿವೇಶನ ರಹಿತರಿಗೆ ಮನೆ ನಿರ್ಮಿಸಲು ಜಾಗವನ್ನು ನಗರದಲ್ಲಿ ಗುರುತಿಸಲು ಒತ್ತಾಯಿಸಿ ಅ.2ರಂದು ಸಂಜೆ 4ಕ್ಕೆ ನಗರದ ಪ್ರಮುಖ ನಾಲ್ಕು ಜಂಕ್ಷನ್‌ಗಳಾದ ಕುಲಶೇಖರ, ಪಡೀಲ್, ಉರ್ವಸ್ಟೋರ್, ಕಾವೂರು ಜಂಕ್ಷನ್‌ನಲ್ಲಿ ಹಕ್ಕೊತ್ತಾಯ ಮಂಡಿಸಲು ನಿರ್ಧರಿಸಿದೆ ಎಂದು ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಬೋಳೂರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News