ಬೈಕ್ ಅಪಘಾತ: ಸಹಸಾವರ ಮೃತ್ಯು
ಬೈಂದೂರು, ಅ.1: ಬೈಂದೂರು -ಕೊಲ್ಲೂರು ಮುಖ್ಯ ರಸ್ತೆಯ ಕಳವಾಡಿ ತಿರುವಿನಲ್ಲಿ ಶನಿವಾರ ಸಂಜೆ ಬೈಕೊಂದು ನಿಯಂತ್ರಣ ತಪ್ಪಿ ಗದ್ದೆ ಬಿದ್ದ ಪರಿಣಾಮ ಸಹಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಪಡುವರಿ ಗ್ರಾಮದ ಕೋಟೆಬಾಗಿಲಿನ ಗಣೇಶ್ ಎಂದು ಗುರು ತಿಸಲಾಗಿದೆ. ಸವಾರ ಮಂಜುನಾಥ್ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಗಣೇಶ್ ವರ್ಸೆಯಲ್ಲಿರುವ ಸಂಬಂದಿಕರ ಮನೆಯಲ್ಲಿ ನಡೆಯಲಿರುವ ಪೂಜಾ ಕಾರ್ಯ ಕ್ರಮಕ್ಕೆ ಮಂಜುನಾಥ್ರ ಬೈಕಿನಲ್ಲಿ ಹೋಗುತ್ತಿದ್ದು, ಆಗ ಕಳವಾಡಿ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ವಾಹನವನ್ನು ನೋಡಿ ಮಂಜುನಾಥ್ ಬೈಕನ್ನು ಎಡಕ್ಕೆ ತಿರುಗಿಸಿದರೆನ್ನಲಾಗಿದೆ.
ಇದರಿಂದ ನಿಯಂತ್ರಣ ತಪ್ಪಿದ ಬೈಕ್ ರಸ್ತೆಯ ಬದಿಯ ಗದ್ದೆಗೆ ಬಿತ್ತೆನ್ನ ಲಾಗಿದೆ. ಆಗ ಅಲ್ಲೇ ಹಾಕಿದ ಕಲ್ಲುಕಂಬಕ್ಕೆ ಹಿಂಬದಿ ಸವಾರ ಗಣೇಶ್ನ ತಲೆ ಬಡಿಯಿತು. ಇದರ ಪರಿಣಾಮ ಗಂಭೀರ ಗಾಯಗೊಂಡ ಗಣೇಶ್ ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.