ಕೋಟೇಶ್ವರ: ಕಲಾವಿದ ಗೋವಿಂದ ಭಟ್ಟರಿಗೆ ಸನ್ಮಾನ
Update: 2017-10-03 14:24 GMT
ಕುಂದಾಪುರ, ಅ.3: ಕೋಟೇಶ್ವರದ ರಥಬೀದಿ ಗೆಳೆಯರು ವತಿಯಿಂದ ಶಾರದಾ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆದ ತಾಳಮದ್ದಲೆ ಕಾರ್ಯಕ್ರಮ ದಲ್ಲಿ ಧರ್ಮಸ್ಥಳ ಮೇಳದ ಹಿರಿಯ ಕಲಾವಿದ ಗೋವಿಂದ ಭಟ್ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಮಲ್ಯಾಡಿ ಶಿವರಾಮ್ ಶೆಟ್ಟಿ ವಹಿಸಿದ್ದರು. ಸಾಲಿಗ್ರಾಮ ಮಕ್ಕಳ ಮೇಳದ ಯಜಮಾನ ಶ್ರೀಧರ ಹಂದೆ ಅಭಿನಂದನಾ ಭಾಷಣ ಮಾಡಿ ದರು. ಮುಖ್ಯ ಅತಿಥಿಗಳಾಗಿ ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್, ಉದ್ಯಮಿ ಶಂಕರ ಐತಾಳ್, ಸರಸ್ವತಿ, ಶಾರದಾ ಕಲ್ಯಾಣ ಮಂಟಪದ ರಮೇಶ್ ಭಟ್ ಉಪಸ್ಥಿತರಿದ್ದರು.
ಶಿವಾನಂದ ಅಡಿಗ ಸ್ವಾಗತಿಸಿದರು. ಶಿಕ್ಷಕ, ಕಲಾವಿದ ಸುಜಯೇಂದ್ರ ಹಂದೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ಗೋವಿಂದ ಭಟ್, ಜಬ್ಬರ್ ಸಮೊ, ರಂಗನಾಥ್ ಭಟ್, ಸುಜಯೇಂದ್ರ ಹಂದೆ, ಮೂಡುಬೆಳ್ಳೆ, ಶಿವಾನಂದ ಕೋಟ, ಎನ್.ಜಿ.ಹೆಗ್ಡೆಯವರಿಂದ ಏಕಾದಶಿ ವೃತ ಮಹಾತ್ಮೆ ತಾಳಮದ್ದಳೆ ಜರಗಿತು.