ಅಕ್ರಮ ಮರಳುಗಾರಿಕೆಗೆ ದಾಳಿ: ಸೊತ್ತು ವಶ

Update: 2017-10-03 17:40 GMT

ಕೋಟ, ಅ.3: ಮೊಳಹಳ್ಳಿ ಗ್ರಾಮದಲ್ಲಿ ಮರತ್ತೂರು ವಾರಾಹಿ ನದಿಗೆ ಹೊಂದಿಕೊಂಡಿರುವ ಪಟ್ಟಾಜಾಗದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಮರಳು ಗಾರಿಕೆಗೆ  ದಾಳಿ ನಡೆಸಿದ ಅಧಿಕಾರಿಗಳ ತಂಡ ಸೊತ್ತು ಗಳನ್ನು ವಶಪಡಿಸಿಕೊಂಡಿದೆ.

 ಸುರೇಂದ್ರ ಶೆಟ್ಟಿ ಯಾನೆ ಮಂಜಯ್ಯ ಶೆಟ್ಟಿ ಹಾಗೂ ಶ್ರೀಧರ ಶೆಟ್ಟಿ ಯಾನೆ ಬಡಿಯಣ್ಣ ಶೆಟ್ಟಿ ಮರತ್ತೂರು ಎಂಬವರು ಮರಳು ದಕ್ಕೆ ನಿರ್ಮಿಸಿಕೊಂಡು ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಕೊಂಡ ಉಡುಪಿ ಗಣಿ ಮತ್ತು ಭೂ ವಿಜ್ಞಾನಿ ಇಲಾಖೆಯ ಭೂವಿಜ್ಞಾನಿ ಮಹೇಶ ನೇತೃತ್ವ ತಂಡ, ಸ್ಥಳಕ್ಕೆ ದಾಳಿ ನಡೆಸಿ 12 ಲೋಡ್(120ಮೆಟ್ರಿಕ್ ಟನ್) ಸಾಮಾನ್ಯ ಮರಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News