ಸುರತ್ಕಲ್: ಕರಾವಳಿ ಚಿಕನ್ ಟ್ರೇಡರ್ಸ್ ಅಸೋಸಿಯೇಶನ್ ವತಿಯಿಂದ ಗಾಂಧಿ ಜಯಂತಿ ಆಚರಣೆ

Update: 2017-10-04 12:03 GMT

ಸುರತ್ಕಲ್, ಅ.4: ಮಹತ್ಮಾ ಗಾಂಧೀಜಿಯವರ ಶಾಂತಿ ಮತ್ತು ಅಹಿಂಸೆಯ ತತ್ವವನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಏನನ್ನು ಬೇಕಾದರು ಸಾಧಿಸಲು ಸಾಧ್ಯ ಎಂದು ಅಸೋಸಿಯೇಶನ್ ಅಧ್ಯಕ್ಷ, ಉದ್ಯಮಿ ಬಶೀರ್ ಹಳೆಯಂಗಡಿ ಅಭಿಪ್ರಾಯಪಟ್ಟರು.

 ಇಲ್ಲಿನ ಕರಾವಳಿ ಚಿಕನ್ ಟ್ರೇಡರ್ಸ್ ಅಸೋಸಿಯೇಶನ್ ವತಿಯಿಂದ 5ನ ವರ್ಷದ ಗಾಂದಿ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಘಸಂಸ್ಥೆ ಹಾಗೂ ಬಡ ಕುಟುಂಬಗಳಿಗೆ ಧನಸಹಾಯವನ್ನು ವಿತರಿಸಿ ಮಾತನಾಡಿದರು.

ಅಸೋಸಿಯೇಶನ್ ಉಪಾಧ್ಯಕ್ಷ ಲಕ್ಷ್ಮಣ ಸಾಲ್ಯಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 
ಕಾರ್ಯಕ್ರಮದಲ್ಲಿ ಸದಸ್ಯರಾದ ಶ್ರೀಕಾಂತ್ ಕಿನ್ನಿಗೋಳಿ, ಹಸನ್ ಶರೀಫ್, ಪುಷ್ಪರಾಜ್ ಮೊದಲಾದವರು ಉಪಸ್ಥಿತರಿದ್ದರು. 

ಕಾರ್ಯದರ್ಶಿ ಫಾರೂಕ್ ಮುಕ್ಕ ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News