ಗಾಂಜಾ ಸೇವನೆ: ಇಬ್ಬರು ವಿದ್ಯಾರ್ಥಿಗಳ ಸೆರೆ
Update: 2017-10-04 16:38 GMT
ಮಣಿಪಾಲ, ಅ.4: ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿರುವ ಮಾಂಡವಿ ಎಮಾರಾಲ್ಡ್ ಬಳಿ ಅ.3ರಂದು ಬೆಳಗ್ಗೆ ಅಕ್ರಮವಾಗಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಮಾಂಡವಿ ಎಮಾರಾಲ್ಡ್ನಲ್ಲಿ ವಾಸವಾಗಿರುವ ನಿತೀಶ್ ಶರ್ಮಾ(20) ಹಾಗೂ ಕುಶಾಗ್ರ ರಾಜೆ(20) ಬಂಧಿತ ಆರೋಪಿಗಳು. ಇವರು ರಸ್ತೆ ಬದಿ ಯಲ್ಲಿ ಗಾಂಜಾವನ್ನು ಸೇವನೆ ಮಾಡಿ ನಿದ್ರಾಜನಕ ಔಷಧಗಳು ಮತ್ತು ಮನೋದ್ರಕಾರಿ ವಸ್ತುಗಳ ಅಧಿನಿಯಮ ಅಡಿಯಲ್ಲಿ ಅಪರಾಧವೆಸಗಿ ರುವು ದಾಗಿ ಪೊಲೀಸರು ಬಂಧಿಸಿದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.