ಉಡುಪಿಯಲ್ಲೂ ಕೋರ್ಟ್ ಕಲಾಪ ಬಹಿಷ್ಕಾರ

Update: 2017-10-04 16:41 GMT

ಉಡುಪಿ, ಅ.4: ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಮೂರ್ತಿಯಾಗಿ ಕಾರ್ಯನಿರ್ವಹಿಸಬೇಕಾಗಿದ್ದ ನ್ಯಾ.ಜಯಂತ್ ಪಟೇಲರನ್ನು ಅಲಹಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿರುವ ಸುಪ್ರೀಂ ಕೋರ್ಟ್ ಕೊಲಿಜಿಯಂನ ಕ್ರಮವನ್ನು ಖಂಡಿಸಿ ಉಡುಪಿ ಜಿಲ್ಲೆಯ ವಕೀಲರು ಇಂದು ಕಲಾಪ ಬಹಿಷ್ಕರಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.

ಉಡುಪಿ ನಗರ, ಕುಂದಾಪುರ ಹಾಗೂ ಕಾರ್ಕಳ ತಾಲೂಕಿನ ವಕೀಲರು ಇಂದು ಬೆಳಗ್ಗೆಯಿಂದ ನ್ಯಾಯಾಲಯದ ಯಾವುದೇ ಕಲಾಪಕ್ಕೆ ಹಾಜರಾಗದೆ ಬಹಿಷ್ಕರಿಸಿದರು. ಉಡುಪಿಯಲ್ಲಿ ಒಟ್ಟು 550 ರಿಜಿಸ್ಟ್ರಾರ್ ಆಗಿರುವ ವಕೀಲ ರಿದ್ದು, ಇವರು ಯಾರು ಕೂಡ ಕಲಾಪದಲ್ಲಿ ಭಾಗವಹಿಸಿರಲಿಲ್ಲ ಎಂದು ಉಡುಪಿ ವಕೀಲರ ಸಂಘದ ಕಾರ್ಯದರ್ಶಿ ಸಂತೋಷ್ ಹೆಬ್ಬಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News