ಕೃಷ್ಣಾಪುರ: ಸಿಡಿಲು ಬಡಿದು ಮನೆ, ಸೊತ್ತು ಹಾನಿ
Update: 2017-10-06 08:43 GMT
ಕೃಷ್ಣಾಪುರ, ಅ. 6: ನಿನ್ನೆ ರಾತ್ರಿ ಸುರಿದ ಮಳೆ, ಸಿಡಿಲು ಬಡಿದು ಇಲ್ಲಿನ ಮನೆಯೊಂದರಲ್ಲಿದ್ದ ಸೊತ್ತುಗಳು ಹಾನಿಯಾಗಿವೆ.
ಕೃಷ್ಣಾಪುರದ 6ನೆ ಬ್ಲಾಕ್ ನಿವಾಸಿ ಜಮಾಲುದ್ದೀನ್ ಎಂಬವರ ಮನೆಯಲ್ಲಿ ಜಮಾಲುದ್ದೀನ್ ಎಂಬವರ ಬಾಡಿಗೆಗೆ ವಾಸವಿದ್ದು, ಸಿಡಿಲು ಬಡಿದ ಪರಿಣಾಮ ಮನೆಯೊಳಗಿದ್ದ ಫ್ರಿಜ್, ಟಿವಿ, ಸೋಫ ಹಾಗೂ ಇತರ ಅಮೂಲ್ಯ ವಸ್ತುಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಈ ಸಂದರ್ಭ ಬಶೀರ್ ಕುಟುಂಬವು ನೆರೆ ಮನೆಯಲ್ಲಿ ಇದ್ದರು ಎನ್ನಲಾಗಿದ್ದು, ಇದರಿಂದ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕ ಮೊಯ್ದಿನ್ ಬಾವಾ, ಕಾರ್ಪೊರೇಟರ್ ಅಯಾಝ್, ಇಲ್ಲಿನ ವಿಎ ಹಾಗೂ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.