ಝುಬೈರ್ ಮನೆಗೆ ಭೇಟಿಗೆ ಬಂದ ಖಾದರ್ ರನ್ನು ವಾಪಸ್ ಕಳುಹಿಸಿದ ಸ್ಥಳೀಯರು

Update: 2017-10-06 13:46 GMT

ಉಳ್ಳಾಲ, ಅ . 6 : ಇತ್ತೀಚಿಗೆ ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಹತ್ಯೆಗೀಡಾದ ಝುಬೈರ್ ಮನೆಗೆ ಭೇಟಿ ನೀಡಲು ಬಂದ  ಸಚಿವ ಯು ಟಿ ಖಾದರ್ ಅವರನ್ನು ಸ್ಥಳೀಯರು ತಡೆದ ಘಟನೆ ಶುಕ್ರವಾರ ಸಂಜೆ ನಡೆದಿದೆ. 

ಸಚಿವ ಖಾದರ್ ಝುಬೈರ್ ಮನೆಗೆ ತೆರಳುತ್ತಿದ್ದಂತೆ ಮನೆಗೆ ಹೋಗದಂತೆ ಅಡ್ಡಿಪಡಿಸಿದ ಸ್ಥಳೀಯರು ಖಾದರ್ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು . "ನೀವು, ನಿಮ್ಮ ಸ್ಥಳೀಯ ನಾಯಕರು ಈ ಕೊಲೆಗೆ ಪರೋಕ್ಷ ಕಾರಣ. ಈ ಹಿಂದೆ ಪೊಲೀಸ್ ಸಿಬ್ಬಂದಿ ಮೇಲೆ ಗೂಂಡಾ ಪಡೆಗಳು ಹಲ್ಲೆ ನಡೆಸಿದಾಗ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನಿಮ್ಮ ಸ್ಥಳೀಯ ನಾಯಕರೇ ಅದನ್ನು ರಾಜಿ ಮಾಡಿ ಇತ್ಯರ್ಥ ಮಾಡಿದ್ದಾರೆ. ಇದರಿಂದಲೇ ಗೂಂಡಾ ಪಡೆಗಳಿಗೆ ಧೈರ್ಯ ಬಂದಿದೆ. ಹಾಗಾಗಿ ಝುಬೈರ್ ಕೊಲೆಯಾಗಿದೆ. ಈಗ ನೀವು ಬಂದು ಸಮಾಧಾನ ಮಾಡುವ ಅಗತ್ಯವಿಲ್ಲ " ಎಂದು ಸ್ಥಳೀಯರು ಖಾದರ್ ಗೆ ಹೇಳಿದ್ದಾರೆ. ಬಳಿಕ ಖಾದರ್ ಅಲ್ಲಿಂದಲೇ ವಾಪಾಸು ಹೋಗಬೇಕಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News