ಅಮೆಮಾರ್: ಮುಅಲ್ಲಿಮ್ ಡೇ ಪ್ರಯುಕ್ತ ಮಜ್ಲಿಸುನ್ನೂರು, ಖಬರ್ ಝಿಯಾರತ್

Update: 2017-10-09 08:03 GMT

ಫರಂಗಿಪೇಟೆ, ಅ. 9: ಎಸ್ಕೆಎಸ್ ಬಿ ವಿ ಬದ್ರಿಯಾ ಮದರಸ ಅಮೆಮಾರ್ ಇದರ ವತಿಯಿಂದ ಮುಅಲ್ಲಿಂ ಡೇ ಪ್ರಯುಕ್ತ ಮಜ್ಲಿಸುನ್ನೂರ್, ಖಬರ್ ಝಿಯಾರತ್
 ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಬದ್ರಿಯಾ ಮಸೀದಿಯ ಅಧ್ಯಕ್ಷ ಹಾಜಿ ಉಮರಬ್ಬ ವಹಿಸಿ ಮಜ್ಲಿಸುನ್ನೂರ್ ಗೆ ಸ್ಥಳೀಯ ಖತೀಬ್  ಅಬೂಸ್ವಾಲಿಹ್ ಪೈಝಿ ನೇತೃತ್ವ ವಹಿಸಿ, ಮಜ್ಲಿಸುನ್ನೂರ್ ನ ಕುರಿತು ಮಾತನಾಡಿದರು. ಈ ಸಂದರ್ಭ ಮಸೀದಿಯ ಅಧ್ಯಕ್ಷರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮಸೀದಿಯ ಕಾರ್ಯದರ್ಶಿ ಅಬೂಸ್ವಾಲಿಹ್ ಮುಸ್ಲೀಯಾರ್,  ಸದಸ್ಯರಾದ ಅಬ್ದುಲ್ ಹಮೀದ್, ಜಮಾಲುದ್ದೀನ್, ಇಬ್ರಾಹೀಂ. ಹಾರಿಸ್ ಮದರಸ ಮುಅಲ್ಲಿಂರಾದ ಇಮ್ರಾನ್ ದಾರಿಮಿ, ಇಸ್ಮಾಯಿಲ್ ಯಮಾನಿ, ಅಬೂಬಕರ್ ಮದನಿ, ಆದಂ ಮದನಿ ಮತ್ತು ಎಸ್ಕೆಎಸ್ಎಸ್ಎಫ್ ಅಮೆಮಾರ್ ಶಾಖೆಯ ಕಾರ್ಯದರ್ಶಿ ಮುಖ್ತಾರ್, ಮಕ್ಬೂಲ್ ಮುಂತಾದವರು ಭಾಗವಹಿಸಿದ್ದರು. ಸದರ್ ಮುಅಲ್ಲಿಂ ಮುಹಿಯುದ್ದೀನ್ ಅಲ್ ಹಸನಿ ಸ್ವಾಗತಿಸಿ, ದಾವೂದ್ ಅಝ್ಝರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News